ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ನಾಲ್ಕು ಅಧಿಕಾರಿಗಳಿಗೆ ಅವರ ಪ್ರಾಮಾಣಿಕತೆ ಹಾಗೂ ಉತ್ತಮ ಸೇವೆಯನ್ನು ಗುರುತಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲಾಗಿದೆ.
https://www.suddikanaja.com/2021/03/01/khelo-india-winter-games-2-golds-won-by-shivamogga-girls/
ಯಾರಿಗೆ ಸಿಎಂ ಪದಕ | ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪದಕ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಎಸ್. ಶಿವಕುಮಾರ್, ಸಹಾಯಕ ಬೋಧಕ ಎಚ್.ದಿನೇಶ್, ಭದ್ರಾವತಿ ಘಟಕದ ಬಿ.ಇ.ವಿಜಯೇಂದ್ರ ಸಾಜೆರ್ಂಟ್ ಇವರುಗಳಿಗೆ ಚಿನ್ನದ ಪದಕ ಹಾಗೂ ಹೊಳೆಹೊನ್ನೂರು ಘಟಕದ ಘಟಕಾಧಿಕಾರಿ ಎಚ್.ಎಲ್. ಸುನೀಲ್ ಕುಮಾರ್ ಅವರಿಗೆ ಬೆಳ್ಳಿಪದಕವನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಿದರು.
ಎಸ್.ಶಿವಕುಮಾರ್ | ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಎಲ್ಲ ವಿಧವಾದ ಕಾನೂನು ಸುವ್ಯವಸ್ಥೆ, ಚುನಾವಣೆ, ಜಾತ್ರೆ, ಇನ್ನಿತರ ಕರ್ತವ್ಯಗಳಲ್ಲಿ ಅತಿ ಹೆಚ್ಚು ಗೃಹರಕ್ಷಕ/ ಗೃಹರಕ್ಷಕಿಯರನ್ನು ಕ್ರೂಡೀಕರಿಸಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಅವಿರತ ಶ್ರಮ ವಹಿಸಿದ್ದಾರೆ. ಇವರ ಪ್ರಾಮಾಣಿಕ ಮತ್ತು ಉತ್ತಮ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಯವರು 2018ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.
https://www.suddikanaja.com/2021/05/11/wrestler-srinivas-died-due-to-corona/
ಎಚ್. ದಿನೇಶ್ | ಗೃಹರಕ್ಷಕ ಇಲಾಖೆಯ ಸಮವಸ್ತ್ರ ನೀತಿ ನಿಯಮಗಳಿಗೆ ಅನುಸಾರವಾಗಿ ಎಲ್ಲ ವಿಧವಾದ ಕರ್ತವ್ಯಗಳಲ್ಲಿ ಲೋಪ ದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿದ್ದಲ್ಲದೇ, ಕೇಂದ್ರ ಕಚೇರಿಯ ಜಿಲ್ಲಾ ತರಬೇತಿಗಳಿಗಾಗಿ ಶಿವಮೊಗ್ಗ ಜಿಲ್ಲೆಯಿಂದ ಶೇ.100 ರಷ್ಟು ಗೃಹರಕ್ಷಕ-ಗೃಹರಕ್ಷಕಿಯರನ್ನು ನಿಯೋಜಿಸಿ ಹಲವಾರು ಚಿನ್ನದ ಪದಕಗಳನ್ನು ಜಿಲ್ಲೆಗೆ ತರುವಲ್ಲಿ ಶ್ರಮಿಸಿದ್ದಾರೆ. ಎಲ್ಲಾ ಕರ್ತವ್ಯಗಳನ್ನು ಲೋಪದೋಷಗಳಿಲ್ಲದೇ ನಿರ್ವಹಿಸಿದ ಪ್ರಯುಕ್ತ ಇವರಿಗೆ 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
ಎಚ್.ಎಲ್. ಸುನೀಲ್ ಕುಮಾರ್ | ಹೊಳೆಹೊನ್ನೂರು ಘಟಕದ ಘಟಕಾಧಿಕಾರಿ ಕರ್ತವ್ಯ ಮತ್ತು ಪ್ರಾಮಾಣಿಕತೆಗೆ 2015ನೇ ಸಾಲಿನ ಬೆಳ್ಳಿಪದಕ ಲಭಿಸಿದೆ.
ಬಿ. ಇ. ವಿಜಯೇಂದ್ರ ಸಾಜೆರ್ಂಟ್ | ಭದ್ರಾವತಿ ಘಟಕದ ಇವರ ಕಾರ್ಯವೈಖರಿಗೆ 2020ನೇ ಸಾಲಿನ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
ಈ ಎಲ್ಲ ಅಧಿಕಾರಿಗಳಿಗೆ ಕಚೇರಿಯ ಸಿಬ್ಬಂದಿ, ಜಿಲ್ಲೆಯ ಎಲ್ಲ ಘಟಕಾಧಿಕಾರಿಗಳು ಮತ್ತು ಎಲ್ಲ ಗೃಹರಕ್ಷಕ, ಗೃಹರಕ್ಷಕಿಯರು ಅಭಿನಂದನೆ ಸಲ್ಲಿಸಿದ್ದಾರೆ.
https://www.suddikanaja.com/2021/06/19/flying-sikh-milkha-singh-passes-away/