ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆ.ಎಸ್.ಒ.ಯು)ವು 2001-02 ರಿಂದ 2012-13ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಅನುತ್ತೀರ್ಣರಾದ ಅಥವಾ ಪರೀಕ್ಷೆ ತೆಗೆದುಕೊಳ್ಳದ ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
https://www.suddikanaja.com/2021/05/26/prisoner-deid-due-to-heart-attack/
ಜುಲೈ 13ರಿಂದ ಪರೀಕ್ಷಾ ಶುಲ್ಕ ಪಾವತಿ ಆರಂಭವಾಗಿದ್ದು, ಆಗಸ್ಟ್ 6ರ ವರೆಗೆ ದಂಡ ಶುಲ್ಕವಿಲ್ಲದೇ ಪಾವತಿಸಲು ಕಡೆಯ ದಿನವಾಗಿದೆ. 200 ರೂಪಾಯಿ ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಆಗಸ್ಟ್ 21 ಅಂತಿಮ ದಿನವಾಗಿದೆ ಎಂದು ಕೆಎಸ್.ಒಯು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ www.ksoumysuru.ac.in ನಲ್ಲಿ ಪರೀಕ್ಷಾ ಅರ್ಜಿ ಮತ್ತು ಪರೀಕ್ಷಾ ಶುಲ್ಕವನ್ನು ಎಲ್ಲ ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ತೊಂದರೆ ಎದುರಾದಲ್ಲಿ ಆನ್ ಲೈನ್ ಸಹಾಯವಾಣಿ ಸಂಖ್ಯೆ 8800335638ಗೆ ಕರೆ ಮಾಡುವಂತೆ ತಿಳಿಸಲಾಗಿದೆ.
https://www.suddikanaja.com/2021/07/13/sslc-exams-during-covid/
ಯಾವ್ಯಾವ ವಿಷಯ | ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಮ್, ಬಿ.ಲಿಬ್, ಐ.ಎಸ್ಸಿ, ಎಂ.ಲಿಬ್.ಐ.ಎಸ್.ಸಿ, ಎಂ.ಬಿ.ಎ, ಎಲ್ಲ ಎಂ.ಎಸ್ಸಿ, ಎಲ್.ಎಲ್.ಎಂ, ಎಂ.ಜಿ.ಎ(ಲಾ), ಎಂ.ಟಿ.ಎಂ. ಸೆಮಿಸ್ಟರ್, ಬಿ.ಇಡಿ, ಎಂ.ಇಡಿ, ಬಿ.ಎಡ್ (ವಿಶೇಷ ಶಿಕ್ಷಣ) ಪದವಿಗಳು, ಸ್ನಾತಕ ಸ್ನಾತಕೋತ್ತರ ಡಿಪ್ಲೊಮಾಗಳು ಮತ್ತು ಸರ್ಟಿಫಿಕೇಟ್ ಕಾರ್ಯಕ್ರಮಗಳ ಪರೀಕ್ಷೆಗಳನ್ನು 2021ರ ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುವುದು.
ಎಲ್ಲೆಲ್ಲಿ ನಡೆಯಲಿವೆ ಪರೀಕ್ಷೆ | ಬಾಗಲಕೋಟೆ, ಪುತ್ತೂರು, ಮೈಸೂರು, ಚಾಮರಾಜನಗರ, ಹಾಸನ, ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಬೆಳಗಾವಿ, ಕಲಬುರಗಿ, ರಾಯಚೂರು, ಮಂಡ್ಯ, ತುಮಕೂರು, ಕೋಲಾರ, ರಾಮನಗರ, ಕುಶಾಲನಗರ, ಚಿಕ್ಕೋಡಿ, ಶಿರಸಿ, ಗದಗ, ಯಾದಗಿರಿ, ವಿಜಯಪುರ, ಬೀದರ್ ಈ ಕೇಂದ್ರಗಳಲ್ಲಿ ನಡೆಸಲಾಗುವುದು.
ಪರೀಕ್ಷೆಗಳ ದಿನಾಂಕಗಳ ವೇಳಾಪಟ್ಟಿಯನ್ನು ಮುಂದೆ ವಿವಿಯ ವೆಬ್ ಸೈಟ್ www.ksoumysuru.ac.in ನಲ್ಲಿ ಪ್ರಕಟಿಸಲಾಗುವುದು ಎಂದು ವಿವಿ ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2020/12/30/penalty-for-dumping-waste-in-empty-land-city-corporation-official-filed-complaint-in-vinobnagar-police-station/