ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರ ಯುವಪೀಳಿಗೆಗೆ ಅಧಿಕ ಆದ್ಯತೆ ನೀಡುತ್ತಿದೆ. ಇದನ್ನು ಪಕ್ಷದ ಪ್ರತಿಯೊಬ್ಬರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ನನ್ನ ಮಂತ್ರಿ ಸ್ಥಾನ ಹೋದರೂ ನನಗೇನೂ ಬೇಸರ ಇಲ್ಲ. ಪದವಿ ಹೋದರೆ ಗೂಟ ಹೋಯ್ತು ಎಂದುಕೊಳ್ಳುತ್ತೇನೆಯೇ ವಿನಹ ಬೇಜಾರು ವ್ಯಕ್ತಪಡಿಸಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇನು? ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ ⇓
ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿ ಸ್ಥಾನ ಗೂಟ ಹೊಡೆದು ಕುಳಿತುಕೊಳ್ಳುವ ಜಾಗ ಅಲ್ಲ. ಹಾಗೂ ನಾನು ಗೂಟಕ್ಕಾಗಿ ರಾಜಕಾರಣದಲ್ಲಿ ಇಲ್ಲ ಎಂದು ತಿಳಿಸಿದರು.
ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಈ ಹಿಂದಿನಿಂದಲೂ ನಿರ್ವಹಿಸಿಕೊಂಡು ಬಂದಿದ್ದೇನೆ. ನನಗೀಗ 72 ವರ್ಷ ಗೂಟದ ಬಗ್ಗೆ ವ್ಯಾಮೋಹ ಇಲ್ಲ. ಪಕ್ಷ ನೀಡುವ ಜವಾಬ್ದಾರಿಗಳನ್ನು ಮಾಡುವೆ ಎಂದು ಹೇಳಿದರು.
https://www.suddikanaja.com/2020/12/02/i-am-not-kuruba-community-leader-said-ks-eshwarappa-in-shivamogga/
ನಳಿನ್ ಕುಮಾರ್ ಕಟಿಲ್ ಅಂತಹ ರಾಜಕಾರಣಿ ಅಲ್ಲ | ಆಡಿಯೋ ವೈರಲ್ ವಿಚಾರದ ಬಗ್ಗೆ ಉತ್ತರಿಸಿದ ಸಚಿವರು, ನಳಿನ್ ಕುಮಾರ್ ಅವರನ್ನು ಬಲಿಪಶು ಮಾಡಬೇಡಿ. ಅವರು ರಾಜ್ಯದಲ್ಲಿ ವ್ಯವಸ್ಥಿತವಾಗಿ ಸಂಘಟನೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಘಟನೆಯ ಶಕ್ತಿಯ ಮೇಲೆಯೇ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ. ಅವರು ಆ ರೀತಿ ಮಾತನಾಡಲು ಸಾಧ್ಯವೇ ಇಲ್ಲ ಎಂದರು.
ಕುಮಾರಸ್ವಾಮಿ ವಿರುದ್ಧ ಕಿಡಿ | ಸಚಿವ ಈಶ್ವರಪ್ಪ ಅವರು ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದರು. ದೆಹಲಿಗೆ ಹೋದಾಗ ಅವರು ಆರು ಬ್ಯಾಗ್ ಗಳನ್ನು ಕೊಂಡೊಯ್ದಿದ್ದಾರೆ ಎಂಬ ಕುಮಾರಸ್ವಾಮಿ ಆರೋಪ ಕೀಳುಮಟ್ಟದ್ದಾಗಿದೆ.
ಯಡಿಯೂರಪ್ಪ ಯಾವುದೋ ಆಕ್ಷಾಂಕ್ಷೆ ನೀಡುವಷ್ಟು ಕೀಳು ಮಟ್ಟದ ರಾಜಕಾರಣಿ ಅಲ್ಲ. ಮೋದಿಯೂ ಅಂತಹದ್ದನ್ನು ಅಪೇಕ್ಷಿಸುವುದಿಲ್ಲ. ಹೀಗಾಗಿ,ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
https://www.suddikanaja.com/2021/06/02/ncc-for-optional-subject-in-ug-and-pg/