ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನ ಸೌಂದರ್ಯ ಸವಿಯುವುದಕ್ಕೆ ಸಾರಿಗೆ ಸಂಸ್ಥೆಯು ವಿಶೇಷ ಆಫರ್ ವೊಂದನ್ನು ಗ್ರಾಹಕರಿಗೆ ನೀಡಿದೆ. ಕೋವಿಡ್ ಅನ್ ಲಾಕ್ ಬಳಿಕ ಬೆಂಗಳೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಜೋಗಕ್ಕೆ ಹರಿದುಬರುತ್ತಿದ್ದಾರೆ. ಆದರೆ, ಖಾಸಗಿ ವಾಹನಗಳನ್ನು ಮಾಡಿಕೊಂಡು ಬರಲು ಆರ್ಥಿಕ ಶಕ್ತಿ ಇಲ್ಲದವರಿಗೆ ಕೆ.ಎಸ್.ಆರ್.ಟಿ.ಸಿ.ಯ ಈ ವೀಕೆಂಡ್ ಪ್ಯಾಕೇಜ್ ಸಹಕಾರಿಯಾಗಲಿದೆ.
https://www.suddikanaja.com/2020/12/17/one-best-moment-events-davangere-organized-state-level-competition/
ಹೇಗಿರಲಿದೆ ಪ್ಯಾಕೇಜ್ | ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಶುಕ್ರವಾರ ಮತ್ತು ಶನಿವಾರ ಪ್ಯಾಕೇಜ್ ನೀಡಲಾಗಿದೆ. ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಟು ಸಾಗರಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ. ಅಲ್ಲಿ ಬೆಳಗ್ಗೆ 7 ಗಂಟೆಯವರೆಗೆ ಪ್ರವಾಸಿಗರಿಗೆ ವಿಶ್ರಾಂತಿಯ ಸಮಯ ಇರಲಿದೆ. 7ರಿಂದ 7.15 ಗಂಟೆಯವರೆಗೆ ಉಪಹಾರ, 7.15ರಿಂದ 7.30ರ ವರೆಗೆ ಸಾಗರದಿಂದ ವರದಹಳ್ಳಿ, 8.30ರಿಂದ 9ರ ವರೆಗೆ ವರದಹಳ್ಳಿಯಿಂದ ವರದಹಳ್ಳಿ ಮೂಲ, 9.15ರಿಂದ 9.30ರ ವರೆಗೆ ವರದಮೂಲದಿಂದ ಇಕ್ಕೇರಿ, 10.30ರಿಂದ 11ರ ವರೆಗೆ ಇಕ್ಕೇರಿಯಿಂದ ಕೆಳದಿ, ಮಧ್ಯಾಹ್ನ 12ರಿಂದ 12.30ರ ವರೆಗೆ ಕೆಳದಿಯಿಂದ ಸಾಗರ, 1.45ರಿಂದ 1.15 ಮಧ್ಯಾಹ್ನದ ಊಟ, 1.30ರಿಂದ 2.15 ಸಾಗರದಿಂದ ಜೋಗ, 6.15ರಿಂದ 7ರ ವರೆಗೆ ಜೋಗದಿಂದ ಸಾಗರ, 7ರಿಂದ 8 ಗಂಟೆಯವರೆಗೆ ಶಾಪಿಂಗ್ ಸಮಯ, 8.30ರಿಂದ 8.45 ರಾತ್ರಿ ಊಟ ಹಾಗೂ ರಾತ್ರಿ 10ಕ್ಕೆ ಸಾಗರದಿಂದ ಹೊರಟು ಬೆಳಗ್ಗೆ 5ಕ್ಕೆ ಬೆಂಗಳೂರಿಗೆ ಬಸ್ ಹೊರಡಲಿದೆ.
ಟ್ರಿಪ್ ಶುಲ್ಕ | ವಯಸ್ಕರಿಗೆ 1,900, 6ರಿಂದ 12 ವರ್ಷದ ಮಕ್ಕಳಿಗೆ 1,700 ರೂಪಾಯಿ.
https://www.suddikanaja.com/2021/07/15/one-click-many-news/