ಸುದ್ದಿ ಕಣಜ.ಕಾಂ
ಭದ್ರಾವತಿ: ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸ್ಥಾಪಿಸಲು ಉದ್ದೇಶಿಸಿರುವ ನ್ಯಾನೊ ಯೂರಿಯಾ ಘಟಕವನ್ನು ಭದ್ರಾವತಿಯಲ್ಲಿ ಸ್ಥಾಪಿಸಬೇಕು ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಉಕ್ಕಿನ ನಗರಿಯಲ್ಲಿ ತಲೆ ಎತ್ತಲಿರುವ ಆರ್.ಎ.ಎಫ್ ಘಟಕ ಹೇಗಿರಲಿದೆ? ಬಟಾಲಿಯನ್ ಕೆಲಸವೇನು?
ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ನಗರ ಬೆಳೆಯುತ್ತಲೇ ಇದೆ. ಇದರಿಂದಾಗಿ, ಘಟಕವನ್ನು ಬೆಂಗಳೂರು ಹೊರತಾಗಿ ಭದ್ರಾವತಿಯಲ್ಲಿ ನೀಡುವುದು ಉತ್ತಮ ಎಂದು ಕೇಂದ್ರ ರಸಗೊಬ್ಬರ ಸಚಿವ ಭಗವಂತ್ ಖೂಬಾ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಒತ್ತಾಯಿಸಿದ್ದಾರೆ.
ಭದ್ರಾವತಿಗೆ ನೀಡಬೇಕು ಎನ್ನುವುದಕ್ಕೆ ಕಾರಣವೇನು | ಮೈಸೂರು ಕಾಗದ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ವಿ.ಐ.ಎಸ್.ಎಲ್. ನಿಧಾನವಾಗಿ ಕಾರ್ಯಾರಂಭಿಸಿದೆ. ಮೂಲಸೌಕರ್ಯಗಳಿಗೆ ಭದ್ರಾವತಿಯಲ್ಲಿ ಯಾವುದೇ ಕೊರತೆ ಇಲ್ಲ. ಹೀಗಾಗಿ, ಹೆಚ್ಚು ಅನುಕೂಲವಾಗಲಿದೆ.
ಘಟಕಕ್ಕೆ ಬೇಕಾಗಿರುವ ನೀರು, ಭೂಮಿ, ಅರಣ್ಯ, ಕಾರ್ಖಾನೆ, ಆಡಳಿತಾತ್ಮಕ ಕಟ್ಟಡಗಳು, ಎಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಶಿಕ್ಷಣ ಸಂಸ್ಥೆಗಳು ಇವೆ. ರೈಲ್ವೆ ಸಂಪರ್ಕ ಲಭ್ಯವಿದ್ದು, ಮಂಗಳೂರು ಬಂದರು ಕೂಡ ಸಮೀಪವಾಗುತ್ತದೆ. ಕಚ್ಚಾವಸ್ತು, ಕಾರ್ಮಿಕರು, ತಂತ್ರಜ್ಞರು ಕೂಡ ಲಭ್ಯವಾಗುತ್ತದೆ. ಹೀಗಾಗಿ, ಭದ್ರಾವತಿ ಹೆಚ್ಚು ಸೂಕ್ತ ಎಂದು ತಿಳಿಸಿದ್ದಾರೆ.
ಭದ್ರಾವತಿ ವಿ.ಐ.ಎಸ್.ಎಲ್ ಆಮ್ಲಜನಕ ಘಟಕ ಪುನರ್ ಆರಂಭ, ಎಷ್ಟು ಆಕ್ಸಿಜನ್ ಉತ್ಪಾದನೆ ಆಗಲಿದೆ?