ಸುದ್ದಿ ಕಣಜ.ಕಾಂ
ಶಿವಮೊಗ್ಗ: ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತಿದ್ದು, ನದಿ ಪಾತ್ರದ ಬಡಾವಣೆಗಳು ಜಲಾವೃತಗೊಂಡಿವೆ. ಆದರೆ, ಇಂತಹ ಸನ್ನಿವೇಶದಲ್ಲಿ ಶುಕ್ರವಾರ ತಡ ರಾತ್ರಿಯವರೆಗೆ ಸಂತ್ರಸ್ತರೊಂದಿಗಿದ್ದು ಸಹಾಯ ಮಾಡಲಾಗಿದೆ.
READ | ಶಿವಮೊಗ್ಗ ನಗರದಲ್ಲಿ ತುಂಗೆ ಸೃಷ್ಟಿಸಿದ ಅನಾಹುತ, 2 ಮನೆ ಗೋಡೆ ಕುಸಿತ, ಎಲ್ಲೆಲ್ಲಿ ಏನಾಗಿದೆ?
ಜಿಲ್ಲಾಯುವ ಕಾಂಗ್ರೆಸ್ ಈ ಕಾರ್ಯ ಮಾಡಿದೆ. ಗಾಂಧಿಬಜಾರ್ ಭಾಗದ ಕುಂಬಾರಗುಂಡಿ, ಬಿ.ಬಿ ರಸ್ತೆ, ಬಟ್ಟೆ ಮಾರ್ಕೆಟ್ ಪ್ರದೇಶದ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ. ಇಂತಹ ಸಂದರ್ಭದಲ್ಲಿ ಜಲಾವೃತದಿಂದ ಸಂಕಷ್ಟದಲ್ಲಿರುವ ನಾಗರಿಕರ ಮನೆಗಳಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಮನೆಯಲ್ಲಿರುವ ವಸ್ತುಗಳನ್ನು ಸಾಗಿಸಲು ಟಾ ಟಾ ಏಸ್ ಮತ್ತು ಟೆಂಪೋ ಗಾಡಿಗಳನ್ನು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಉಂಬ್ಳೇಬೈಲಲ್ಲಿ ಕಾಡಾನೆ ಉಪಟಳ, ಸೆರೆ ಹಿಡಿಯಲು ಕೈಗೊಂಡ ಸಿದ್ಧತೆಗಳೇನು ಗೊತ್ತಾ?
ಜನರೇಟರ್ ವ್ಯವಸ್ಥೆ, ಮೋಟರ್ ಮೂಲಕ ವಾಟರ್ ಲಿಫ್ಟ್ | ಮನೆಗಳಲ್ಲಿರುವ ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಕರೆಂಟ್ ಇಲ್ಲದ ಕಾರಣ ಜನರೇಟರ್ ವ್ಯವಸ್ಥೆ ಮಾಡಲಾಯಿತು.ರಸ್ತೆಯ ಮೇಲೆ ಹಾಗೂ ಮನೆಗಳಿಗೆ ತುಂಬಿರುವ ನೀರನ್ನು ಸರಾಗವಾಗಿ ಚಲಿಸುವಂತೆ ಮಾಡಲು ಮೋಟರ್ ಗಳ ವ್ಯವಸ್ಥೆಯನ್ನು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್. ಕುಮರೇಶ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಿದರು.
ಜಲಾವೃತಗೊಂಡ ಪ್ರದೇಶದ ಮನೆಗಳಿಗೆ ತಡರಾತ್ರಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ , ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಎಚ್.ಪಿ. ಗಿರೀಶ್ ಭೇಟಿ ನೀಡಿದರು. ಸಂತ್ರಸ್ತರಿಗೆ ಧೈರ್ಯ ಹೇಳುವುದರ ಜೊತೆಗೆ ಅವಶ್ಯಕತೆ ಇರುವ ವ್ಯವಸ್ಥೆಗಳನ್ನು ಪೂರೈಕೆ ಮಾಡಲಾಯಿತು.
ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ವಿನಯ್ ಐನಾಪುರ್, ಶಕ್ತಿ ಕುಮಾರ್ , ಸುಹಾಸ್ ಗೌಡ , ವೆಂಕಟೇಶ್ ಕಲ್ಲೂರು, ಮಂಜುನಾಥ್ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.