ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾರಿ ವರ್ಷಧಾರೆಯಿಂದಾಗಿ ತಾಳಗುಪ್ಪ ಬಳಿ ರೈಲ್ವೆ ಹಳಿಯ ಮೇಲೆ ನೀರು ನಿಂತಿದ್ದ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರವನ್ನು ಪುನರಾರಂಭಿಸಲಾಗಿದೆ.
ಸಾಗರ ತಾಲೂಕಿನ ಜಂಬಗಾರು ಮತ್ತು ತಾಳಗುಪ್ಪ ನಡುವೆ ಹಳಿ ಜಲಾವೃತಗೊಂಡಿತ್ತು. ಮುಂಜಾಗೃತಾ ಕ್ರಮವಾಗಿ ರೈಲ್ವೆ ಸಂಚಾರ ಆರಂಭಗೊಂಡಿದ್ದು, ಮಳೆಯ ಅಬ್ಬರ ಕಡಿಮೆಗೊಳ್ಳುವುದರ ಜೊತೆಗೆ ಬೆಂಗಳೂರು, ಮೈಸೂರಿಗೆ ಪ್ರಯಾಣ ಮುಂದುವರಿದಿದೆ.
ಶುಕ್ರವಾರ ತೆರಳಬೇಕಿದ್ದ ರೈಲನ್ನು ಸ್ಥಗಿತಗೊಳಿಸಿ, ತಾಳಗುಪ್ಪ-ಮೈಸೂರು ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಜತೆಗೆ, ಇಂಟರ್ಸಿಟಿಯನ್ನು ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿಯೇ ನಿಲುಗಡೆ ಮಾಡಲಾಗಿತ್ತು. ಶನಿವಾರದಿಂದ ರೈಲ್ವೆ ಸೇವೆ ಯಥಾಪ್ರಕಾರ ಪುನರಾರಂಭಗೊಂಡಿದೆ.