ಸುದ್ದಿ ಕಣಜ.ಕಾಂ
ಸಾಗರ: ಹಿಟ್ ಆಂಡ್ ರನ್ ಪ್ರಕರಣವೊಂದರಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಭಾನುವಾರ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿ ಖಂಡಿಕಾ ಕ್ರಾಸ್ ಸಮೀಪ ದ್ವಿಚಕ್ರ ವಾಹನಕ್ಕೆ ಅಪರಿಚತ ವಾಹನ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕುಗ್ವೆ ಗ್ರಾಮದ ಯುವಕ ಶಿವರಾಜ್(26) ಮೃತಪಟ್ಟಿದ್ದು, ಶಿವರಾಜ್ ತಂದೆ ಲಕ್ಷ್ಮಣ್ ಎಂಬುವವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.