ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳನ್ನು ವರ್ಗಾವಣೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಚೇತನ್ ಅವರು ಆದೇಶ ಹೊರಡಿಸಿದ್ದಾರೆ.
https://www.suddikanaja.com/2021/03/10/opportunity-for-inter-corporation-transfer-in-ksrtc/
ಯಾವ್ಯಾವ ಪಂಚಾಯಿತಿಯಲ್ಲಿ ವರ್ಗಾವಣೆ | ಸೊರಬ ತಾಲೂಕಿನ ನಿಸರಾಣಿ ಗ್ರಾಮ ಪಂಚಾಯಿತಿ ಪಿಡಿಒ ಸುಭಾಷ್ ಅವರನ್ನು ಕಶುನವಳ್ಳಿಯಲ್ಲಿ ಖಾಲಿ ಇದ್ದ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಪಂ ಪಿಡಿಒ ಸುಮಾ ಅವರನ್ನು ಸುಭಾಷ್ ಅವರ ವರ್ಗಾವಣೆಯಿಂದ ಖಾಲಿಯಾದ ನಿಸರಾಣಿಗೆ ವರ್ಗಾವಣೆ ಮಾಡಲಾಗಿದೆ. ಸೊರಬದ ಇಂಡುವಳ್ಳಿ ಗ್ರಾಪಂ ಪಿಡಿಒ ಸುದರ್ಶನ್ ಅವರನ್ನು ಭಾರತಿ ಅವರ ಜಾಗಕ್ಕೆ ನ್ಯಾರ್ಶಿ ಗ್ರಾಪಂಗೆ ವರ್ಗಾವಣೆ ಮಾಡಲಾಗಿದೆ.
ಭದ್ರಾವತಿ ತಾಲೂಕಿನ ಗುಡುಮಗಟ್ಟ ಪಿಡಿಒ ಹನುಮಂತಪ್ಪ ಅವರನ್ನು ಅರಬಿಳಚಿ, ಸಾಗರದ ಶಿರವಂತೆ ಪಿಡಿಒ ಪ್ರಭು ಇಟಗಿ ಅವರನ್ನು ಆನಂದಪುರಗೆ ನಿಯೋಜಿಸಲಾಗಿದೆ. ಭದ್ರಾವತಿಯ ಸಿಂಗನಮನೆ ಪಿಡಿಒ ಸೋಮಶೇಖರ್ ಅವರನ್ನು ಶಿವಮೊಗ್ಗದ ಹೊಸಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ತಾಲೂಕಿನ ಬಿದರೆ ಗ್ರಾಪಂ ಪಿಡಿಒ ನಾಗಮಣಿ ಅವರಿಗೆ ಹಾಲಿ ಸ್ಥಳದಲ್ಲಿಯೇ ಮುಂದುವರಿಸಲಾಗಿದೆ.
https://www.suddikanaja.com/2021/04/11/ksrtc-employee-transferred-to-kolar-ramanagara/