ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾದರೂ ಜಲಾಶಯಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭದ್ರಾ ಜಲಾಶಯದ ಪೂರ್ಣ ಮಟ್ಟ ತಲುಪಲು ಇನ್ನೂ ನಾಲ್ಕಡಿ ಮಾತ್ರ ಬಾಕಿ ಇದೆ.
VIDEO REPORT | ಭದ್ರಾ ಜಲಾಶಯ ಭರ್ತಿಗೆ ನಾಲ್ಕು ಅಡಿ ಬಾಕಿ ಇದೆ. ಡ್ಯಾಂ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಭದ್ರಾ ಡ್ಯಾಂ ಪೂರ್ಣ ಮಟ್ಟ 186 ಅಡಿ ಇದ್ದು, ಪ್ರಸ್ತುತ 181.90 ಅಡಿ ನೀರಿದೆ. 8,338 ಕ್ಯೂಸೆಕ್ಸ್ ಒಳಹರಿವು ಇದೆ. ಕಳೆದ ವರ್ಷ ಇದೇ ದಿನ 153.11 ಅಡಿ ನೀರಿದ್ದು, 3,095 ಕ್ಯೂಸೆಕ್ಸ್ ಒಳಹರಿವು ಇತ್ತು. ಈ ಸಲ ಪುಷ್ಯ ಮಳೆ ಸಾಥ್ ನೀಡಿದ್ದರಿಂದ ಎಲ್ಲ ಜಲಾಶಯಗಳು ಸಮೃದ್ಧವಾಗಿವೆ.
ತಾಲೂಕುವಾರು ಮಳೆ ವಿವರ | ಶಿವಮೊಗ್ಗ 6.40 ಎಂಎಂ, ಭದ್ರಾವತಿ 4 ಎಂಎಂ, ತೀರ್ಥಹಳ್ಳಿ 43.80 ಎಂಎಂ, ಸಾಗರ 10.80 ಎಂಎಂ, ಶಿಕಾರಿಪುರ 4.40 ಎಂಎಂ, ಸೊರಬ 14 ಎಂಎಂ, ಹೊಸನಗರ 34.20 ಎಂಎಂ ಸೇರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 16.80 ಎಂಎಂ ಮಳೆಯಾಗಿದೆ.
https://www.suddikanaja.com/2021/07/23/heavy-rain-in-shivamogga-inflow-increase-in-linganamakki-jogfalls/
ಭದ್ರಾ-ಕಾಡಾ ಅಧ್ಯಕ್ಷ ಭೇಟಿ | ಭದ್ರಾ ಜಲಾಶಯ ಸಂಪೂರ್ಣ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಆನಂತರ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಯ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನಾಲೆಯ ಮುಖಾಂತರ ಹರಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ತರೀಕೆರೆ ತಾಲ್ಲೂಕು ಶಾಂತಿಪುರ ಗ್ರಾಮದಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಸಂಬಂಧ ನಿರ್ಮಿಸಿರುವ ಪಂಪ್ ಹೌಸ್ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಭದ್ರಾ ಕಾಡಾ ನಿರ್ದೇಶಕ ವಿನಾಯಕ್, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2021/07/06/experts-committee-for-investigation-of-stilling-basin-work/