ಸುದ್ದಿ ಕಣಜ.ಕಾಂ
ಸಾಗರ: ತೀರ್ಥಹಳ್ಳಿಯ ಒಂಟಿ ಮನೆಯೊಂದರಲ್ಲಿ ಈ ಹಿಂದೆ ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಸಾಗರ ತಾಲೂಕಿನಲ್ಲಿ ಇಂತಹದ್ದೇ ಒಂದು ಘಟನೆ ಶುಕ್ರವಾರ ನಡೆದಿದೆ.
ಶಿವಮೊಗ್ಗದಲ್ಲಿ Re active ಆಯ್ತು ಪಲ್ಸರ್ ಗ್ಯಾಂಗ್, 9 ಕಡೆ ಚೆಕ್ ಪೋಸ್ಟ್ ಸ್ಥಾಪಿಸಿ ಹೈ ಅಲರ್ಟ್
ಆನಂದಪುರಂ ಬಳಿಯ ಕೆಂಜಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಾಡಹಗಲೆ ಮನೆಗೆ ನುಗ್ಗಿ ಮಹಿಳೆಯೊಬ್ಬರನ್ನು ಥಳಿಸಿ ಮನೆಯಲ್ಲಿದ್ದ ಸುಮಾರು 2 ಲಕ್ಷ ರೂಪಾಯಿಯನ್ನು ಲೂಟಿ ಮಾಡಲಾಗಿದೆ.
ಹೇಗೆ ನಡೀತು ಘಟನೆ | ಕೆಂಜಗಾಪುರ ಗ್ರಾಮದ ಪುರೋಹಿತ ಶ್ರೀಧರ್ ಭಟ್ಟರು ಮನೆಯಲ್ಲಿ ಇಲ್ಲದಾಗ ಮೂವರು ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ. ಆ ವೇಳೆ, ಮನೆಯಲ್ಲಿದ್ದು ಭಟ್ಟರ ಸಹೋದರಿ ವಿಜಯಲಕ್ಷ್ಮೀ ಎಂಬುವವರಿಗೆ ಥಳಿಸಿದ್ದಾರೆ.
ದೇವರ ವಿಗ್ರಹಕ್ಕೆಂದು ಇಟ್ಟಿದ್ದ ಹಣ | ದೇವರ ವಿಗ್ರಹ ತಯಾರಿಸುವುದಕ್ಕಾಗಿ ಮೀಸಲು ಇಟ್ಟಿದ್ದ ಸುಮಾರು 2 ಲಕ್ಷ ರೂಪಾಯಿಯನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.
ಶಿರಾಳಕೊಪ್ಪದಲ್ಲಿ ನಕಲಿ ತೋರಿಸಿ ಅಸಲಿ ಚಿನ್ನ ಲೂಟಿ ಮಾಡಿದ ಪ್ರಕರಣ: ನಾಲ್ವರ ಬಂಧನ