ಸುದ್ದಿ ಕಣಜ.ಕಾಂ
ಸೊರಬ: ವಿದ್ಯಾರ್ಥಿನಿಯೊಬ್ಬಳು ಹೊಟ್ಟೆ ನೋವು ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ಮಲೆನಾಡಿನ ಒಂಟಿ ಮನೆಗಳ ಮೇಲೆ ಮತ್ತೆ ಟಾರ್ಗೆಟ್, ಹಾಡಹಗಲೇ ದರೋಡೆ, ಮಹಿಳೆಯನ್ನು ಥಳಿಸಿ ಹಣ ಲೂಟಿ
ತಾಲೂಕಿನ ಚಂದ್ರಗುತ್ತಿಯಲ್ಲಿ ಘಟನೆ ನಡೆದಿದ್ದು, ಚಂದ್ರಗುತ್ತಿ ಗ್ರಾಮದ ನಾಗರಾಜ್ ಮರಡಿ ಎಂಬುವವರ ಪುತ್ರಿ ಸುಚಿತ್ರಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಎಲ್ಲರೂ ಗದ್ದೆಯ ಕೆಲಸಕ್ಕೆ ಹೋಗಿದ್ದಾಗ ಸುಚಿತ್ರಾಗೆ ವಿಪರೀತ ಹೊಟ್ಟೆ ಕಾಣಿಸಿಕೊಂಡಿದೆ. ನೋವು ತಾಳದೇ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯು ಪಿಯುಸಿ ಓದುತಿದ್ದಳು.