ಭದ್ರಾವತಿಯಲ್ಲಿ ಮರಕ್ಕೆ ಕಾರು ಡಿಕ್ಕಿ‌ ಹೊಡೆದು ವ್ಯಕ್ತಿ ಸಾವು, ಎಲ್ಲಿ ನಡೀತು ಘಟನೆ?

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಉಂಬ್ಳೆಬೈಲು ಸಮೀಪ‌ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.

READ | ಭದ್ರಾವತಿಯಲ್ಲಿ‌ ನಡೆದಿದ್ದ ಮರ್ಡರ್, ಐವರು ಅರೆಸ್ಟ್

ಗೋಣಿಬೀಡು ಗ್ರಾಮದ ನಿವಾಸಿ ಲಿಂಗರಾಜು (28) ಎಂಬುವವರು ಮೃತಪಟ್ಟಿದ್ದಾರೆ. ವ್ಯಾಗನಾರ್ ಕಾರಿನಲ್ಲಿ ಕೋಣಂದೂರು ಕಡೆಗೆ ಹೊರಟಿದ್ದಾಗ ಎಚ್.ಕೆ. ಜಂಕ್ಷನ್ ನಿಂದ ಉಂಬ್ಳೆಬೈಲು ಕಡೆಗೆ ಹೋಗುವ ರಸ್ತೆಯಲ್ಲಿ ಅತಿ ವೇಗದಿಂದ ವಾಹನ ಚಾಲನೆ ಮಾಡಿಕೊಂಡು ಹೋಗಿದ್ದು, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!