ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಾಲಕ ಆಟವಾಡಲಿ ಎಂಬ ಕಾರಣಕ್ಕೆ ಹಾಕಲಾಗಿದ್ದ ಉಯ್ಯಾಲೆಯೇ ಸಾವಿಗೆ ಕಾರಣವಾದ ದಾರುಣ ಘಟನೆ ಹಾಡೋನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
READ | ಕೊರೊನಾ ಸಾವಿನ ಸಂಖ್ಯೆಯಲ್ಲಿ ಇಳಿಕೆ, ತಾಲೂಕುವಾರು ಸೋಂಕಿತರ ವಿವರ ಇಲ್ಲಿದೆ
ಹಾಡೋನಹಳ್ಳಿ ಗ್ರಾಮದ ಕಿಶೋರ್ (13) ಬಾಲಕ ಮೃತಪಟ್ಟಿದ್ದಾನೆ. ಅದೇ ಗ್ರಾಮದಲ್ಲಿ ಎಂಟನೇ ತರಗತಿ ಓದುತಿದ್ದ ಬಾಲಕ ಶಾಲೆಗಳು ರಜೆ ಇರುವುದರಿಂದ ಮನೆಯಲ್ಲೇ ಇದ್ದ. ಆ ವೇಳೆ ಉಯ್ಯಾಳೆಯಲ್ಲಿ ಆಡುವಾಗ ಸೀರೆಗೆ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ.
ಆಸ್ಪತ್ರೆಗೆ ಕರೆದುಕೊಂಡು ಹೋದರು ಆಗಲಿಲ್ಲ ಪ್ರಯೋಜನ | ಮನೆಯಲ್ಲಿ ಸೀರೆ ಕಟ್ಟಿ ಮಾಡಲಾಗಿದ್ದ ಉಯ್ಯಾಲೆಯಲ್ಲಿ ಕಿಶೋರ್ ಒಬ್ಬನೇ ಆಟವಾಡುತಿದ್ದ. ಆಗ ಸೀರೆಯಲ್ಲಿ ಕೊರಳು ಸಿಕ್ಕಿಬಿದ್ದಿದೆ. ಮನೆಯವರು ಬಂದು ಬಾಲಕನನ್ನು ಸೀರೆಯಿಂದ ಬಿಡಿಸಿದ್ದಾರೆ. ನಂತರ, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೂಡ ಕೊಡಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.