ಸುದ್ದಿ ಕಣಜ.ಕಾಂ
ಉಡುಪಿ: ಮನುಷ್ಯರು ಕಳೆದು ಹೋದರೇ ಹುಡುಕುವುದು ಕಷ್ಟ ಅಂತಹದ್ದರಲ್ಲಿ ಇಲ್ಲೊಬ್ಬರು ಕಾಣೆಯಾದ ಗೋವು ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಬ್ರಹ್ಮಾವರ ಸಾರ್ವಜನಿಕರಿಂದ ಬುಧವಾರ ದೂರು ನೀಡಲಾಗಿದೆ.
ದೂರಿನಲ್ಲಿ ಏನಿದೆ | ‘ಬ್ರಹ್ಮಾವರದಲ್ಲಿ ಚಿರಪರಿಚಿತವಾಗಿರುವ ಕಪ್ಪು, ಬಿಳುಪು ನಂದೀಶ, ಮಹಾಲಿಂಗ ಮತ್ತು ಭಜರಂಗಿ ಎಂದು ಕರೆಯಲ್ಪಡುತ್ತಿದ್ದ ದನ ಕಾಣೆಯಾಗಿದೆ. ಅದನ್ನು ಕೂಡಲೇ ಹುಡುಕಿ ಕೊಡಿ’ ಎಂದು ಮನವಿ ಮಾಡಲಾಗಿದೆ.