ಸುದ್ದಿ ಕಣಜ.ಕಾಂ
ಸಾಗರ: ನಿರಂತರ ಮಳೆಯಿಂದಾಗಿ ತಾಳಗುಪ್ಪ ಸಮೀಪದ ಕಾನ್ಲೆಯಲ್ಲಿ ರೈಲ್ವೆ ಹಳಿಯ ಮೇಲೆ ನೀರು ಹರಿಯುತ್ತಿವೆ. ಇದು ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ.
ಇಂದು ಮಧ್ಯಾಹ್ನ ತಾಳಗುಪ್ಪದಿಂದ ಹೊರಡುವ ತಾಳಗುಪ್ಪ -ಮೈಸೂರು ರೈಲು ಸಾಗರದಿಂದ ಚಲಿಸುತ್ತಿದೆ. ಅಧಿಕ ಮಳೆಯಿಂದಾಗಿ ತಾಳಗುಪ್ಪಕ್ಕೆ ತಲುಪದ ಈ ರೈಲು ಮಧ್ಯಾಹ್ನ 3.45 ಕ್ಕೆ ಸಾಗರ ಜಂಬಗಾರು ರೈಲ್ವೆ ನಿಲ್ದಾಣದಿಂದ ಮೈಸೂರಿಗೆ ಹೊರಡಲಿದೆ. ಸ್ಥಿತಿ ಹೀಗೆಯೇ ಮುಂದುವರಿದರೆ ಮುಂಜಾಗೃತಾ ಕ್ರಮವಾಗಿ ಕ್ರಮಕೈಗೊಳ್ಳಬಹುದಾದ ಸಾಧ್ಯತೆ ಇದೆ.