ಸುದ್ದಿ ಕಣಜ.ಕಾಂ | SHIVAMOGGA | RAINFALL
ಶಿವಮೊಗ್ಗ: ಪುಷ್ಯ ಮಳೆಯ ಆರ್ಭಟ ಮುಗಿಯುತಿದ್ದಂತೆ ಜಿಲ್ಲೆಯಲ್ಲಿ ಆಶ್ಲೇಷ ಮಳೆ ಚುರುಕಾಗಿದೆ.
ಜುಲೈ ಮೂರನೇ ವಾರದಲ್ಲಿ ಬಿಟ್ಟು ಬಿಡದೆ ನಿರಂತರವಾಗಿ ಸುರಿದ ಪುಷ್ಯ ಮಳೆ ನೆರೆಯನ್ನೇ ಸೃಷ್ಟಿಸಿತ್ತು. ತುಂಗೆಯ ಆರ್ಭಟ ಜೋರಾಗಿ ನಗರದ ನಾನಾ ಭಾಗಗಳಲ್ಲಿ ನೀರು ನುಗ್ಗಿ ಆವಾಂತರ ಉಂಟಾಗಿತ್ತು. ಹಲವು ಮನೆಗಳು ಜಖಂಗೊಂಡಿದ್ದವು. ಇನ್ನೇನು ಮಳೆಯ ಆರ್ಭಟ ಕಡಿಮೆ ಆಯಿತು ಎನ್ನುವ ಹೊತ್ತಿಗೆ ಆಶ್ಲೇಷ ಮಳೆ ಆರಂಭಗೊಂಡಿದೆ.
READ | ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಯಶ್ವಂತಪುರ-ಶಿವಮೊಗ್ಗ ರೈಲು ಸಂಚಾರ ಪುನರಾರಂಭ, ಯಾವಾಗಿಂದ ಸಂಚರಿಸಲಿದೆ ರೈಲು?
ಮಂಗಳವಾರ ಸಂಜೆಯ ನಂತರ ಮಳೆ ಚುರುಕುಗೊಂಡಿದ್ದು,
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಇನ್ನೂ ಮುಂದುವರಿಯಲಿದೆ. ಒಂದುವೇಳೆ, ಧಾರಾಕಾರ ಮಳೆಯಾದರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಮಂಗಳವಾರ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಬಿಟ್ಟು ಬಿಟ್ಟು ಮಳೆಯಾಗಿದೆ. ಆದರೆ, ಸಂಜೆಯಿಂದ ಮಳೆ ಸುರಿಯಲಾರಂಬಿಸಿದೆ.