ಸುದ್ದಿ ಕಣಜ.ಕಾಂ
ಶಿವಮೊಗ್ಗ: ಯಶ್ವಂತಪುರದಿಂದ ಶಿವಮೊಗ್ಗ ನಿತ್ಯ ಸಂಚರಿಸುವ ಇಂಟರ್ ಸಿಟಿ ರೈಲು ಸಂಚಾರವನ್ನು ಆಗಸ್ಟ್ 10ರಿಂದ ಪುನರಾರಂಭಿಸುತ್ತಿರುವುದಾಗಿ ರೈಲ್ವೆ ಪ್ರಕಟಣೆ ತಿಳಿಸಿದೆ.
https://www.suddikanaja.com/2021/06/22/talguppa-mysuru-train-service-start/
ಕೊರೊನಾ ಸೋಂಕು ಹರಡುತ್ತಿರುವುದರಿಂದ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಆದರೀಗ, ರೈಲಿಗೆ ಹೆಚ್ಚುತ್ತಿರುವ ಬೇಡಿಕೆ, ಜನ ಸಂಚಾರ ಪೂರ್ವ ಸ್ಥಿತಿಗೆ ಬಂದಿರುವುದರಿಂದ ರೈಲನ್ನು ಆರಂಭಿಸಲಾಗುತ್ತಿದೆ.
ಯಶ್ವಂತಪುರದಿಂದ ಆಗಸ್ಟ್ 10ರಂದು ಬೆಳಗ್ಗೆ 9.15 ಗಂಟೆಗೆ ಹೊರಡಲಿರುವ ರೈಲು (07357) 9.56ಕ್ಕೆ ತುಮಕೂರು, 10.58ಕ್ಕೆ ತಿಪಟೂರು, 11.25ಕ್ಕೆ ಅರಸಿಕೆರೆ, ಮಧ್ಯಾಹ್ನ 12.05 ಕಡೂರು, 12.18ಕ್ಕೆ ಬೀರೂರು, 12.45ಕ್ಕೆ ತರೀಕೆರೆ ಜಂಕ್ಷನ್, 1.05ಕ್ಕೆ ಭದ್ರಾವತಿ ಹಾಗೂ 2.30ಕ್ಕೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಅದೇ ದಿನ (07358) 3.30 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟು 3.48ಕ್ಕೆ ಭದ್ರಾವತಿ, 4.07ಕ್ಕೆ ತರೀಕೆರೆ, 4.33ಕ್ಕೆ ಬೀರೂರು, 4.43ಕ್ಕೆ ಕಡೂರು, 5.20ಕ್ಕೆ ಅರಸಿಕೆರೆ, 5.48ಕ್ಕೆ ತಿಪಟೂರು, 6.48ಕ್ಕೆ ತುಮಕೂರು ಹಾಗೂ ರಾತ್ರಿ 10 ಗಂಟೆಗೆ ಯಶ್ವಂತಪುರಕ್ಕೆ ತಲುಪಲಿದೆ.
ಆನ್ಲೈನ್ ನಲ್ಲಷ್ಟೇ ಟಿಕೆಟ್ ಲಭ್ಯ
ಕೋವಿಡ್ ಹಿನ್ನೆಲೆ ಆನ್ಲೈನ್ ನಲ್ಲಷ್ಟೇ ಟಿಕೆಟ್ ಕಾಯ್ದಿರಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
https://www.suddikanaja.com/2021/07/29/shikshaka-mitra-app-using-mandotory-from-august-2/