ಸುದ್ದಿ ಕಣಜ.ಕಾಂ | SHIVAMOGGA | POLITICS
ಶಿವಮೊಗ್ಗ: ಅನುಭವಿ ರಾಜಕಾರಣಿ, ಪಕ್ಷದ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿದೆ. |
ವಯಸ್ಸು ಹಾಗೂ ಪಕ್ಷದಲ್ಲಿ ಸಾಕಷ್ಟು ಸಲ ಅವಕಾಶಗಳು ಲಭಿಸಿದ್ದರಿಂದ ಈಶ್ವರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತಿತ್ತು. ಆದರೆ, ಪಕ್ಷದಲ್ಲಿ ಅವರು ಮಾಡಿರುವ ಸಂಘಟನೆ ಹಾಗೂ ಅಭಿಮಾನಿಗಳಿಂದ ವ್ಯಕ್ತವಾದ ಒತ್ತಡದಿಂದಾಗಿ ಅವರಿಗೆ ಮಂತ್ರಿಗಿರಿ ಲಭಿಸಿದೆ.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಇದೇ ಮೊದಲು ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಹೀಗಾಗಿ, ತೀರ್ಥಹಳ್ಳಿಯಲ್ಲೂ ಸಂಭ್ರಮ ಮನೆ ಮಾಡಿದೆ. ಒಕ್ಕಲಿಗ ಸಮುದಾಯದ ಜ್ಞಾನೇಂದ್ರ ಅವರು ರಾಜಕೀಯದಲ್ಲಿ ಯಡಿಯೂರಪ್ಪ ಅವರ ಸಮಕಾಲೀನರಾಗಿದ್ದು, ಪಕ್ಷ ನಿಷ್ಠರು ಆಗಿದ್ದಾರೆ. ಇದೆಲ್ಲವನ್ನು ಮನಗಂಡು ಸಚಿವ ಸ್ಥಾನ ನೀಡಲಾಗಿದೆ. ಇವರು 1984ರಿಂದ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ನಾಲ್ಕು ಸಲ ಶಾಸಕರಾಗಿದ್ದಾರೆ.
ಹಾಲಪ್ಪಗೆ ತಪ್ಪಿದ ಅವಕಾಶ
ಶಿವಮೊಗ್ಗ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ಲಭಿಸಿವೆ. ಹೀಗಾಗಿ, ಈಡಿಗ ಸಮುದಾಯದ ಸಾಗರ ಶಾಸಕ ಹರತಾಳು ಹಾಲಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇವರು ನಾಲ್ಕು ಸಲ ಶಾಸಕರಾಗಿದ್ದಾರೆ.
ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಶೀಘ್ರವೇ ಸಂಪುಟದಲ್ಲಿ ನಿರ್ಧಾರ