ಸುದ್ದಿ ಕಣಜ.ಕಾಂ | SHIVAMOGGA | CRIME
ಶಿವಮೊಗ್ಗ: ನಾಲ್ಕು ಜನ ಬೈಕ್ ನಲ್ಲಿ ಬಂದು ಮನೆಯ ಮಾಲೀಕನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ, ದರೋಡೆ ಮಾಡಿದ್ದಾರೆ. ಇದರಿಂದ ಗ್ರಾಮದ ಜನ ಭಯಭೀತರಾಗಿದ್ದಾರೆ.
ತಾಲೂಕಿನ ಚಿಕ್ಕಮರಡಿ ಗ್ರಾಮದಲ್ಲಿ ಮಂಗಳವಾರ ಸಂಜೆ ಘಟನೆ ನಡೆದಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದು ಚಿಕ್ಕಮರಡಿ ಗ್ರಾಮದಲ್ಲಿ ನಡೆದಿದ್ದೇನು?
ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಬಂದಿದ್ದ ನಾಲ್ಕು ಜನ ದುಷ್ಕರ್ಮಿಗಳು ಚಿಕ್ಕಮರಡಿ ಗ್ರಾಮದ ಜಯಪ್ಪ ಗೌಡ (65) ಎಂಬುವವರನ್ನು ಹೊರಗೆ ಬರುವಂತೆ ಕರೆದಿದ್ದಾರೆ. ಆಗ ಚಾಕುವಿನಿಂದ ಜಯಪ್ಪ ಅವರಿಗೆ ಒಬ್ಬನು ಚುಚ್ಚಿದ್ದಾನೆ. ಇದರಿಂದ ಮನೆಯವರೆಲ್ಲ ಗಾಬರಿಗೆ ಒಳಗಾಗಿದ್ದಾರೆ. ತಕ್ಷಣ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬೀರುವಿನ ಬೀಗ ಬೆದರಿಸಿ ಪಡೆದು ಲೂಟಿ ಮಾಡಿದ್ದಾರೆ.
READ | ನೂತನ ಸಚಿವರಿಗೆ ಜಿಲ್ಲೆಯ ಹೊಣೆ, ಯಾರಿಗೆ ಯಾವ ಜಿಲ್ಲೆಯ ಜವಾಬ್ದಾರಿ?
ಅಂದಾಜು 20 ಲಕ್ಷ ರೂಪಾಯಿ ನಗದು, 150 ಗ್ರಾಂ ಚಿನ್ನದ ಆಭರಣ, ಬೆಳ್ಳಿಯ ಸಾಮಗ್ರಿಗಳು ಸೇರಿ ಅಂದಾಜು 30 ಲಕ್ಷ ರೂಪಾಯಿ ಮೌಲ್ಯ ಬೆಲೆಬಾಳುವ ವಸ್ತುಗಳನ್ನು ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿಯೇ ಕೃತ್ಯ
ಜಯಪ್ಪ ಗೌಡರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅದರಲ್ಲಿಒಬ್ಬರು ಬೆಂಗಳೂರಿನಲ್ಲಿದ್ದರೆ, ಮತ್ತೊಬ್ಬರು ಶಿವಮೊಗ್ಗದಲ್ಲಿದ್ದಾರೆ. ಅವರು ಸಹ ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ. ಇದನ್ನೆಲ್ಲ ಗಮನಿಸಿಯೇ ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
READ | ರೈಲ್ವೆ ಸೀಸನ್ ಟಿಕೆಟ್ ಪುನರಾರಂಭ, ಯಾವಾಗಿಂತ ವಿತರಣೆ, ಅವಧಿ ಮುಗಿದ ಟಿಕೆಟ್ ಹೊಂದಿದವರಿಗೆ ಗುಡ್ ನ್ಯೂಸ್
ಗಾಯಗೊಂಡವರಿಗೆ ಚಿಕಿತ್ಸೆ
ದರೋಡೆಗೂ ಮುನ್ನ ಜಯಪ್ಪಗೌಡ ಅವರಿಗೆ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆಗೋಸ್ಕರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಕೂಡ ಭೇಟಿ ನೀಡಿದೆ. ಆರೋಪಿಗಳ ಬಗ್ಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/06/27/elephant-in-lakkinakoppa/