ಸುದ್ದಿ ಕಣಜ.ಕಾಂ | KARNATAKA | POLITICS
ಶಿವಮೊಗ್ಗ: ಬಿಜೆಪಿ ಚುಮಾವಣೆ ಹಾಗೂ ಪಕ್ಷ ಸಂಘಟನೆಗಾಗಿ ಅಹರ್ನಿಶಿ ಪ್ರಯತ್ನಿಸಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಯಾದವ(ಗೊಲ್ಲರ) ಜಿಲ್ಲಾ ಸಂಘ ಕಾರ್ಯದರ್ಶಿ ಕೆ. ಶಿವಾನಂದಪ್ಪ ಎಚ್ಚರಿಸಿದರು.
KARNATAKA CABINET | ರಾಜ್ಯ ಸಂಪುಟದಲ್ಲಿ ಯಾರಿಗೆ ಎಂಟ್ರಿ, ಯಾರಿಗೆ ಎಕ್ಸಿಟ್
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯಾದವ ಜನಾಂಗದ ಜನಸಂಖ್ಯೆ ಕರ್ನಾಟಕದಲ್ಲಿ ಅಂದಾಜು 40 ಲಕ್ಷ ಇದೆ. ಆದರೆ, ರಾಜಕೀಯ ಸ್ಥಾನಮಾನ ನೀಡಿಲ್ಲ. ನೂತನ ಸಂಪುಟದಲ್ಲಿಯಾದರೂ ಅವಕಾಶ ಸಿಗಬಹುದು ಎಂದುಕೊಳ್ಳಲಾಗಿತ್ತು. ಆದರೆ, ಯಾದವ ಸಮಾಜವನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ಕೆ. ಆಂಜನಪ್ಪ, ಪದಾಧಿಕಾರಿಗಳಾದ ಕೆ.ಎನ್. ಜಯಶೇಖರ್, ಪಿ. ರಾಜು, ಪುಷ್ಪಾವತಿ, ದೇವೇಂದ್ರಪ್ಪ, ಗಣೇಶ್, ಹುಚ್ಚಪ್ಪ ಇದ್ದರು.