ಸುದ್ದಿ ಕಣಜ.ಕಾಂ | BHADRAVATHI | RAINFALL
ಭದ್ರಾವತಿ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತಿದ್ದು, ಡ್ಯಾಂ ಪೂರ್ಣ ಮಟ್ಟ ತಲುಪುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರನ್ನು ಹೊರಬಿಡಲಾಗುತಿದ್ದು, ಹೊಸ ಸೇತುವೆ ಮುಳುಗುವ ಸ್ಥಿತಿಗೆ ತಲುಪಿದೆ. ಹೀಗಾಗಿ, ಸೇತುವೆಯ ಎರಡೂ ಬದಿಯಲ್ಲಿ ಬ್ಯಾರಿಕೆಡ್ ಅಳವಡಿಸಲಾಗಿದೆ.
ಭದ್ರಾ ಜಲಾಶಯದಲ್ಲಿ ಪ್ರಸ್ತುತ 184.7 ಅಡಿ ನೀರಿದ್ದು, ಒಳಹರಿವು 19,402 ಕ್ಯೂಸೆಕ್ಸ್ ಇದ್ದು, 18,465 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಹೀಗಾಗಿ, ಸೇತುವೆಯ ಮೇಲುಗಡೆಯಿಂದ ನೀರು ಹರಿಯುವ ಸಾಧ್ಯತೆ ಇದೆ.
ಸೇತುವೆ ಎರಡೂ ಬದಿ ಕ್ಲೋಸ್
ಹೊಸ ಸೇತುವೆಯ ಮೇಲಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರ ಹಿತಕ್ಕಾಗಿ ಸೇತುವೆಯ ಎರಡೂ ತುದಿಗಳಿಗೆ ಶನಿವಾರ ರಾತ್ರಿಯಿಂದ ಬ್ಯಾರಿಕೆಡ್ ಅಳವಡಿಸಲಾಗಿದೆ. ಜನರು ಆ ಕಡೆಗೆ ಹೋಗದಂತೆ ಮನವಿ ಮಾಡಲಾಗಿದೆ. ಈ ಭಾಗಕ್ಕೆ ವಾಹನ ಹಾಗೂ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.
ಪ್ರತಿ ವರ್ಷ ಇದೇ ಗೋಳು
ಹಳೇ ಸೇತುವೆಗಿಂತ ಹೊಸ ಸೇತುವೆಯೇ ಕೆಳಮಟ್ಟದಲ್ಲಿದೆ. ಹೀಗಾಗಿ, ಪ್ರತಿ ವರ್ಷ ಹೊಳೆಗೆ ಅಧಿಕ ನೀರು ಬಿಟ್ಟಾಗ ಸೇತುವೆಯ ಮೇಲ್ಭಾಗದಿಂದ ನೀರು ಹರಿಯುತ್ತವೆ. ಈ ಸಲವೂ ಅಧಿಕ ಪ್ರಮಾಣದ ನೀರು ಹೊರಗೆ ಹರಿಬಿಡುತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡೂ ಬದಿ ಬಂದ್ ಮಾಡಲಾಗಿದೆ.