ಸುದ್ದಿ ಕಣಜ.ಕಾಂ | SHIVAMOGGA | POLITICS
ಶಿವಮೊಗ್ಗ: ‘ನಾವೇನು ಶಾಸಕರಲ್ವ, ಮಳೆ ಹಾನಿಯ ಬಗ್ಗೆ ನಮಗೇಕೆ ಮಾಹಿತಿ ಕೊಡಲ್ಲ…’ ಹೀಗೆಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ತುಂಬು ಸಭೆಯಲ್ಲೇ ಗುಡುಗಿದ್ದಾರೆ.
https://www.suddikanaja.com/2021/05/18/plan-to-make-rural-place-covid-free-bold-step-by-mla/
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಳೆಹಾನಿ ಹಾಗೂ ಕೋವಿಡ್ ನಿರ್ವಹಣೆ ಕುರಿತ ಸಭೆಯಲ್ಲಿ ಕೆಂಡಾಮಂಡಲಗೊಂಡರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆÉ.ಎಸ್.ಈಶ್ವರಪ್ಪ ಅವರು ಸಭೆ ತೆಗೆದುಕೊಳ್ಳುತ್ತಿದ್ದಾಗ ಆಯನೂರು ಅವರು, ಈಶ್ವರಪ್ಪ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಗಳಿಗೆ ಆಹ್ವಾನ ನೀಡುವುದಿಲ್ಲ, ಮರ್ಯಾದೆ ಕೊಡಲ್ಲ
ಜಿಲ್ಲಾಧಿಕಾರಿ ಸಭೆ ಇಲ್ಲವೇ ತಾಲೂಕು ಆಡಳಿತದ ಸಭೆಗೆ ಆಹ್ವಾನಿಸುತ್ತಿಲ್ಲ. ಅನುದಾನ, ಪರಿಹಾರ ಧನ ಇತ್ಯಾದಿಗಳ ಬಗ್ಗೆ ಮಾಹಿತಿ ಕೊಡುವುದಿಲ್ಲ. ನಾವುಗಳು ಶಾಸಕರಂತೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾದ ಜಾನಿಯ ಬಗ್ಗೆ ಮಾಹಿತಿ ಕೇಳಲಾಗಿದೆ. ಆದರೆ, ಇದುವರೆಗೆ ನೀಡಿಲ್ಲ. ಬಹುಶಃ ಅಧಿಕಾರಿಗಳು ನಮ್ಮನ್ನು ಶಾಸಕರೆಂದು ಪರಿಭಾವಿಸಿಲ್ಲ ಎನಿಸುತ್ತದೆ. ಹಾಗಾದರೆ, ಅವರುಗಳೇ ಸಭೆ ನಡೆಸಲಿ, ನಾವ್ಯಾಕೆ ಇದಕ್ಕೆಲ್ಲ ಬರೆಬೇಕು ಎಂದು ಹೇಳಿ ಶಾಸಕರಾದ ಆರ್. ಪ್ರಸನ್ನ ಕುಮಾರ್, ಎಸ್.ರುದ್ರೇಗೌಡರನ್ನು ಕರೆದುಕೊಂಡು ಹೊರಗೆ ನಡೆದರು.
ಡಿಸಿ, ಸಿಇಒ ಮೇಲೆಯೇ ಕೆಂಡಾಮಂಡಲ
ಸಭೆಯಿಂದ ಹೊರಗೆ ಹೋಗುತ್ತಿದ್ದಾಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ ಅವರು ಮನವೊಲೈಸಲು ಯತ್ನಿಸಿದರು. ಆಗ ಅವರುಗಳ ಮೇಲೆಯೇ ಆಯನೂರು ಅವರು ಹರಿಹಾಯ್ದರು. ಅಧಿಕಾರಿಗಳು ನಮಗೆ ಅವಮಾನ ಮಾಡುತ್ತಿದ್ದಾರೆ ಎಂದರು.
ಈಶ್ವರಪ್ಪ ಮಧ್ಯ ಪ್ರವೇಶ, ಬಗೆಹರಿದ ಸಮಸ್ಯೆ
ಶಾಸಕರುಗಳಿಗೆ ಮಾಡುವ ಅವಮಾನ ತಮಗೂ ಮಾಡಿದಂತೆ. ಹೀಗಾಗಿ, ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು. ಬಳಿಕ ಭುಗಿಲೆದ್ದ ಅಸಮಾಧಾನ ಶಾಂತವಾಯಿತು.
https://www.suddikanaja.com/2021/05/27/aynur-manjuanth-furious-reaction-on-cpy/