ಸುದ್ದಿ ಕಣಜ.ಕಾಂ | TALUK | BLOOD DONATION
ಶಿರಾಳಕೊಪ್ಪ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 84 ಯೂನಿಟ್ ರಕ್ತ ಸಂಗ್ರಹವಾಗಿದೆ.
https://www.suddikanaja.com/2021/02/02/tadagani-women-polytechnic-college-name-change-order-viral/
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (ಎಸ್.ಐ.ಒ), ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್.ಆರ್.ಎಸ್), ಜಮಾತ್ ಇಸ್ಲಾಮಿ ಹಿಂದ್ ವತಿಯಿಂದ ಶಿರಾಳಕೊಪ್ಪದ ಕದಂಬ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಸ್ವಯಂ ಪ್ರೇರಿತ ರಕ್ತದಾನ ಶಿಬಿರ’ದಲ್ಲಿ ರಕ್ತದಾನ ಮೂಲಕ ಶಿರಾಳಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಟಿ.ರಮೇಶ್ ಉದ್ಘಾಟಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಡಾ. ಮಹಾಲಿಂಗ, ಡಾ. ಅಮೃತ್ ಅಮೃತಾಂಷ, ಕದಂಬ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಗುರುಪ್ರಸಾದ್, ಎಸ್.ಐ.ಒ ಸಂಘಟನೆಯ ನಿಜಾಮುದ್ದೀನ್ ರಫೀಕ್ ಮೂಬೀನ್, ಜಮಾತೆ ಇಸ್ಲಾಮಿಯ ಅಸ್ಲಾಂ ಮೊಹಮ್ಮದ್ ಹುಸೇನ್, ಕಾಲೇಜಿನ ವಿದ್ಯಾರ್ಥಿನಿ ಅರ್ಚನಾ ಮತ್ತಿತರ ಮೂವರು ಹಾಗೂ ಸಂಘಟನೆಯ ಕಾರ್ಯಕರ್ತರು, ಊರಿನ ಯುವಕರು ಸೇರಿ ಒಟ್ಟು 84 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಶಿಬಿರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅರುಣ್ ಕುಮಾರ್, ಪ್ರಮುಖರಾದ ಮುಹಮ್ಮದ್ ಆಸಿಫ್, ಅಮೀನ್, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
https://www.suddikanaja.com/2021/05/03/tele-medicine-center-start-in-shivamogga-to-serve-covid-patients/