ಸುದ್ದಿ ಕಣಜ.ಕಾಂ | TALUK | SIGANDUR
ಸಾಗರ: ಸಿಗಂದೂರಿಗೆ ತೆರಳಲು ಕಳಸವಳ್ಳಿಯಲ್ಲಿ ಶರಾವತಿ ಹಿನ್ನೀರಿಗೆ ನಿರ್ಮಾಣಗೊಳ್ಳುತ್ತಿರುವ ಬ್ರಿಡ್ಜ್ ಕಾಮಗಾರಿ ಪ್ರಗತಿಯಲ್ಲಿದ್ದು ಇದು 2023 ಕ್ಕೆ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಪೀರ್ ಪಾಶಾ ಹೇಳಿದರು.
ಸೇತುವೆ, ರಸ್ತೆ ಕುಸಿತ, ಶಿವಮೊಗ್ಗ, ಉಡುಪಿ, ಕುಂದಾಪುರ, ಮಂಗಳೂರು ಸಂಪರ್ಕ ಕಡಿತ, ಪರ್ಯಾಯ ಮಾರ್ಗದ ವ್ಯವಸ್ಥೆ
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಶೇ.30ರಷ್ಟು ಕೆಲಸ ಮುಗಿದಿದೆ. 164 ಪೈಲ್ಸ್ ಕಂಪ್ಲೀಟ್ ಆಗಿದೆ. 121 ಕೋಟಿ ರೂಪಾಯೊ ವೆಚ್ಚವಾಗಿದೆ ಎಂದು ತಿಳಿಸಿದರು.
ಅಪ್ರೋಚ್ ರಸ್ತೆ ಎನ್.ಎಚ್.ಗೆ ಸಂಪರ್ಕ ಕಲ್ಪಿಸಬೇಕು
ಅಪ್ರೋಚ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸದಿದ್ದರೆ ಭವಿಷ್ಯದಲ್ಲಿ ಇದು ಸರಿಪಡಿಸುವುದು ಕಷ್ಟವಾಗಲಿದೆ. ಇದರಿಂದ ಪ್ಯಾಚ್ ವರ್ಕ್ ಗಳಾಗಲಿದ್ದು, ಸೇತುವೆ ಹಾಳಾಗಲಿದೆ. ಹಾಗಾಗಿ, ಇದನ್ನು ಎನ್.ಎಚ್.ಗೆ ಅಪ್ರೋಚ್ ರಸ್ತೆ ಕೂಡಿಸಬೇಕೆಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಪೀರ್ ಪಾಷ 369ಇ ಎಂದು ಈ ಸೇತುವೆಗೆ ಕರೆಯಲಾಗಿದೆ. ಡಿಪಿಆರ್ ಮಾಡಲು ಸ.ಸ್ಥೆಯೊಂದಕ್ಕೆ ನೀಡಲಾಗಿದೆ. 500 ಕೋಟಿ ರೂಪಾಯಿ ಡಿಪಿಆರ್ ತಯಾರಾಗಲಿದೆ. ಅಪ್ರೋಚ್ ರಸ್ತೆ ನೀಡಿಲಿದ್ದಾರೆ. 7 ಕಿಮಿ ವೈಲ್ಡ್ ಅರಣ್ಯ ಕ್ಲಿಯರೆನ್ಸ್ ಸಿಗಲಿದೆ ಎಂದರು.