ಸುದ್ದಿ ಕಣಜ.ಕಾಂ | TALENT | CAMPUS NEWS
ಶಿವಮೊಗ್ಗ: ಪೆಟ್ರೋಲ್, ಡಿಸೇಲ್ ದರ ಗಗನಕ್ಕೇರುತ್ತಿರುವ ಬೆನ್ನಲ್ಲೆ ನಗರದ ಜೆ.ಎನ್.ಎನ್.ಸಿ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬ್ಯಾಟರಿ ಚಾಲಿತ ಬೈಕ್ ಆವಿಷ್ಕರಿಸಿದ್ದು, ಇದು 60-70 ಮೈಲೇಜ್ ನೀಡುತ್ತದೆ.
ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ವಿದ್ಯಾರ್ಥಿಗಳು ರೂಪಿಸಿದ ನಾವಿನ್ಯ ಯೋಜನೆಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜತೆಗೆ, ಭಾರಿ ಮೆಚ್ಚುಗೆಗೂ ಪಾತ್ರವಾಯಿತು.
ಎಲೆಕ್ಟ್ರಿಕ್ ಬೈಕ್, ಸ್ಕೂಟರ್, ಕ್ವಾಡ್ ಬೈಕ್ ಗಳು ಸುಮಾರು ನಾಲ್ಕರಿಂದ ಐದು ಗಂಟೆಗಳ ಬ್ಯಾಟರಿ ಚಾರ್ಜ್ ಮಾಡಿದ ಬಳಿಕ 60 ರಿಂದ 70 ಕಿ.ಮೀ ಮೈಲೇಜ್ ನೀಡಲಿವೆ. ಮನೆಯಲ್ಲಿಯೇ ಬ್ಯಾಟರಿ ರಿಚಾರ್ಜ್ ಮಾಡಬಹುದಾಗಿದೆ. ಒಂದು ಸಲ ಪೂರ್ಣ ಚಾರ್ಜ್ ಮಾಡಿದ್ದಲ್ಲಿ 4-5 ಯೂನಿಟ್ ವಿದ್ಯುತ್ ತಗುಲಲಿದೆ. ಇದಕ್ಕೆ ಅಂದಾಜು 30 ರೂಪಾಯಿಗಳ ಖರ್ಚಾಗಲಿದೆ ಎಂದು ಸಂಶೋಧನಾರ್ಥಿಗಳು ತಿಳಿಸಿದ್ದಾರೆ.
ಒಂದೇ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಹಾನಿ, ಹಲವೆಡೆ ಗುಡ್ಡ ಕುಸಿತ, ಎಲ್ಲಿ ಎಷ್ಟು ಹಾನಿ?
ಏನೇನು ಸಂಶೋಧನಾ ಸಾಮಗ್ರಿಗಳ ಪ್ರದರ್ಶನ
ನೀರಿನ ಶುದ್ಧೀಕರಣ ಘಟಕ, ಪೆಡಲ್ ಬ್ರೇಕ್ ಮತ್ತು ವೇಗ ವರ್ಧಕ ವ್ಯವಸ್ಥೆ, ಸಿ.ಎನ್.ಸಿ ಯಂತ್ರಕ್ಕಾಗಿ ವಕ್ ಪೀಸ್ ಹೋಲ್ಡಿಂಗ್ ಜಿಗ್, ಸಸ್ಯಗಳ ನಾರು ತೆಗೆಯುವ ಯಂತ್ರ, ವಿದ್ಯುತ್ ಚಾಲಿತ ಬೈಕ್, ವಿದ್ಯುತ್ ಚಾಲಿತ ಸ್ಕೂಟರ್, ವಿಕಲಚೇತನರಿಗಾಗಿ ವಿನ್ಯಾಸಗೊಳಿಸಿದ ವಿದ್ಯುತ್ ಚಾಲಿತ ಕ್ವಾಡ್ ಬೈಕ್, ಕಳೆ ತೆಗೆಯುವ ಯಂತ್ರ, ತ್ರಿಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಅಗತ್ಯ ವಸ್ತುಗಳ ರಚನೆಯ ಅಭಿವೃದ್ದಿ, ಕೈಗಾರಿಕೆಗಳಿಂದ ಹೊರಬರುತ್ತಿರುವ ತ್ಯಾಜ್ಯ ನೀರಿನ್ನು ಸ್ಥಳೀಯ ಸಸ್ಯಗಳ ಮೂಲಕ ಫೈಟೊರೆಮಿಡಿಯೇಷನ್ ಮೂಲಕ ಶುದ್ಧೀಕರಿಸುವ ಯಂತ್ರಗಳನ್ನು ಈ ವೇಳೆ ಪ್ರದರ್ಶನಕ್ಕೆ ಇಡಲಾಗಿತ್ತು.
ಅನುಪಯುಕ್ತದಿಂದ ಉಪಯುಕ್ತ ವಸ್ತು
ಅನುಪಯುಕ್ತ ಹಾಗೂ ಹಳೆಯ ಇಂಧನ ಚಾಲಿತ ಬೈಕ್, ಸ್ಕೂಟರ್ ಗಳನ್ನು ನವೀಕರಿಸಿ ನೂತನ ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಪ್ರದರ್ಶನಕ್ಕಿಟ್ಟು ಗಮನ ಸೆಳೆಯಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎ.ಎಸ್.ವಿಶ್ವನಾಥ್, ಉಪಾಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಖಜಾಂಚಿ ಸಿ.ಆರ್.ನಾಗರಾಜ್, ಕುಲಸಚಿವ ಪ್ರೊ. ಹೂವಯ್ಯಗೌಡ, ಪ್ರಭಾರ ಪ್ರಾಂಶುಪಾಲ ಡಾ.ಪಿ.ಮಂಜುನಾಥ್, ಪ್ರಮುಖರಾದ ಡಾ.ಎಂ.ಎಂ.ರಜತ್ ಹೆಗಡೆ, ಡಾ.ಈ. ಬಸವರಾಜ್, ಡಾ.ಅಮಿತ್ ಕುಮಾರ್, ಎಸ್.ಪರಮೇಶ್ವರ್ ಉಪಸ್ಥಿತರಿದ್ದರು.