ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಇರುವುದರಿಂದ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದೆ. ಹೀಗಾಗಿ, ಆಗಸ್ಟ್ 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 1ರ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.
ಎಲ್ಲೆಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ?
ಶಾಂತಿನಗರ, ರಾಗಿಗುಡ್ಡ, ಸೇವಾಲಾಲ್ ನಗರ, ದೇವಂಗಿ ತೋಟ, ತಾವರೆಚಟ್ನಳ್ಳಿ, ಈಶ್ವರ್ ರೈಸ್ ಮಿಲ್, ಪೇಸ್ ಕಾಲೇಜು, ವಡ್ಡರಹಳ್ಳಿ, ವಿಜಯಲಕ್ಷ್ಮೀ ರೈಸ್ ಮಿಲ್, ಯುಜಿಡಿ ಪ್ಲಾಂಟ್, ಶಾದ್ ನಗರ, ಹೊನ್ನಾಳಿ ರಸ್ತೆ, ಶ್ರುತಿ ಮೋಟಾರ್ಸ್, ಮಲ್ಲಿಕಾರ್ಜುನ್ ನಗರ, ಚೌಡೇಶ್ವರಿ ಕಾಲೊನಿ, ಶೇಷಾದ್ರಿಪುರಂ, ಶಂಕರಮಠ ರಸ್ತೆ, ಗುಂಡಪ್ಪ ಶೆಡ್, ಮಲ್ಲೇಶ್ವರ ನಗರ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.