ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ಇತ್ತೀಚೆಗೆ ಬೈಕ್ ಕಳ್ಳತನ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಆತನಿಂದ ಕಳವು ಮಾಡಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ.
ಇಂದಿರಾ ನಗರದ ಮಹಮದ್ ಅರ್ಷಾನ್ (22) ಬಂಧಿತ ಆರೋಪಿ. ಈತ ಆಗಸ್ಟ್ 18ರಂದು ಕೂಬಾ ಮಸೀದಿ ಸಮೀಪ ಮನೆಯ ಎದುರುಗಡೆಯೇ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ್ದ. ಬೈಕ್ ಮಾಲೀಕ ಸೈಯ್ಯದ್ ಮುಸ್ತಾಫಾ ಕಳ್ಳತನ ಬಗ್ಗೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
READ | ಭದ್ರಾವತಿಯಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು, ಹೇಗೆ ಸಾಗಿಸಲಾಗುತಿತ್ತು?
ವಿಚಾರಣೆ ವೇಳೆ ಮೂರು ಪ್ರಕರಣಕ್ಕೆ ಪರಿಹಾರ
ದೂರು ದಾಖಲಿಸಿಕೊಂಡ ತನಿಖೆ ಆರಂಭಿಸಿದ ಭದ್ರಾವತಿ ನಗರ ವೃತ್ತ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಯ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಭದ್ರಾವತಿ ಹಳೆನಗರ, ನ್ಯೂ ಟೌನ್ ಹಾಗೂ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ 3 ದ್ವಿಚಕ್ರ ವಾಹನಗಳು ಸಿಕ್ಕಿವೆ.
ಕೋವಿಡ್ ಸೈಡ್ ಎಫೆಕ್ಟ್, ಶೋಕಿಗಾಗಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಸೆರೆ