ಸುದ್ದಿ ಕಣಜ.ಕಾಂ | KARNATAKA | CRIME
ಶಿರಾಳಕೊಪ್ಪ: ವ್ಯಕ್ತಿಯೊಬ್ಬರಿಂದ ಚಿನ್ನ, ನಗದು ದರೋಡೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ಅನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 21ರಂದು ಶಿಕಾರಿಪುರ ಟೌನ್ ನಿವಾಸಿ ಮಂಜುನಾಥ್ ಎಂಬುವವರು ಶಿಕಾರಿಪುರ-ಶಿರಾಳಕೊಪ್ಪ ರಸ್ತೆಯ ಬದಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದಾಗ 4 ಜನ ಅಪರಿಚಿತರು 2 ದ್ವಿಚಕ್ರ ವಾಹನಗಳಲ್ಲಿ ಬಂದು ಕೊರಳಿನಲ್ಲಿದ್ದ ರೋಲ್ಡ್ ಗೋಲ್ಡ್ ಸರ, ನಗದು ಹಣ ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು. ತಕ್ಷಣ ಮಂಜುನಾಥ್ ಅವರು ದೂರಿನ ನೀಡಿದ್ದು ಅದರನ್ವಯ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
ಯಾರ್ಯಾರು ಬಂಧಿತರು
ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ಮೇಲಿನಕೇರಿ ನಿವಾಸಿಗಳಾದ ಸೈಯದ್ ಇಸ್ರಾರ್(26), ಇರ್ಫಾನ್ ಅಹ್ಮದ್ (32) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ವಿರುದ್ಧ ಹೊರ ಜಿಲ್ಲೆಯಲ್ಲೂ ಕೇಸ್
ಶಿರಾಳಕೊಪ್ಪ ಠಾಣೆ 4, ಶಿಕಾರಿಪುರ ಟೌನ್ ಠಾಣೆ 2, ದೊಡ್ಡಪೇಟೆ ಠಾಣೆ 1, ಕುಂಸಿ ಠಾಣೆ 1 ಹಾಗೂ ರಾಣೆಬೆನ್ನೂರು ಠಾಣೆ 1 ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳಿಗೆ ಸೇರಿದ ಒಟ್ಟು ಮೌಲ್ಯ 37,68,900 ರೂಪಾಯಿಗಳ 561 ಗ್ರಾಂ ಚಿನ್ನದ ಆಭರಣ, 9 ಕೆಜಿ 960 ಗ್ರಾಂ ಬೆಳ್ಳಿಯ ಸಾಮಗ್ರಿ, 6 ದ್ವಿ ಚಕ್ರ ವಾಹನ, 1 ಕಾರು, 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಶಿರಾಳಕೊಪ್ಪದಲ್ಲಿ ನಕಲಿ ತೋರಿಸಿ ಅಸಲಿ ಚಿನ್ನ ಲೂಟಿ ಮಾಡಿದ ಪ್ರಕರಣ: ನಾಲ್ವರ ಬಂಧನ