ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರಿನಲ್ಲಿ ಯುವಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ.
ಕೊಪ್ಪ ಗ್ರಾಮದ ರವಿ (23) ಮೃತಪಟ್ಟಿದ್ದಾನೆ. ಅಡಕೆ ಗೊನೆಗಳನ್ನು ಕೀಳುವಾಗ ಗಳಕ್ಕೆ ವಿದ್ಯುತ್ ತಂತಿ ತಗುಲಿದ್ದು, ಆತ ಮೃತಪಟ್ಟಿದ್ದಾನೆ.
ಪಿಳ್ಳಂಗೆರೆ ಗ್ರಾಮ ಸಮೀಪದ ಅಡಕೆ ತೋಟದಲ್ಲಿ ಗೊನೆಗಳನ್ನು ಕೀಳುವಾಗ ಘಟನೆ ನಡೆದಿದೆ. ವಿದ್ಯುತ್ ಶಾಕ್ ತಗುಲಿ ನೆಲಕ್ಕುರುಳಿದ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.