ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ನಗರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮುಂದೆ ಶುಕ್ರವಾರ ತಡ ರಾತ್ರಿ ಬುಲೆರೋ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
https://www.suddikanaja.com/2020/11/14/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%85%e0%b2%aa%e0%b2%98%e0%b2%be%e0%b2%a4/
ಎನ್.ಆರ್.ಪುರದಿಂದ ಶಿವಮೊಗ್ಗ ಎಪಿಎಂಸಿಗೆ ಬುಲೆರೋದಲ್ಲಿ ಹೋಗುತ್ತಿದ್ದಾಗ ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಮುಂದೆ ಚಾಲಕ ಸನ್ನಿ ಎಂಬುವವರ ಆಯ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ವಾಹನ ಮಗುಚಿ ಬಿದ್ದಿದೆ.
ವಾಹನದ ಅಡಿಯಲ್ಲಿ ಸಿಲುಕಿದ್ದ ಚಾಲಕನ ಸಹಾಯಕ ಪಾಪಚ್ಚ ಎಂಬುವವರನ್ನು ರಕ್ಷಿಸಲಾಗಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ದಾರಿಹೋಕ ವಿಶ್ವನಾಥ್ ಎಂಬುವವರಿಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
https://www.suddikanaja.com/2021/06/19/smart-city-works-in-shivamogga/
ಹೇಗೆ ನಡೀತು ಘಟನೆ?
ವಾಹನವು ದಾರಿಹೋಕನಿಗೆ ಡಿಕ್ಕಿ ಹೊಡೆದು ಚಾಲಕನ ಆಯ ತಪ್ಪಿ ರಸ್ತೆಯ ಪಕ್ಕದ ತಡೆ ಗೋಡೆಗೆ ಡಿಕ್ಕಿ ಹೊಡೆದು ಬುಲೆರೋ ವಾಹನವು ಮಗುಚಿ ಬಿದ್ದಿದೆ. ಆಗ ವಾಹನದ ಅಡಿ ಸಿಲುಕಿದ್ದ ಪಾಪಚ್ಚನನ್ನು ಅಗ್ನಿ ಶಾಮಕ ಸಿಬ್ಬಂದಿ ಕ್ರೋಬರ್, ಬೋಲ್ಟ್ ಕಟರ್, ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಜೀವ ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಸಿಬ್ಬಂದಿ
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ್ ಕುಮಾರ್, ಠಾಣಾಧಿಕಾರಿ ಕೆ.ಎನ್.ಪ್ರವೀಣ್, ಸಿಬ್ಬಂದಿ ಬಿ.ಟಿ.ನಾಗೇಶ್, ವಿಜಯ್ ಖುರೇಷಿ, ಪಾಂಡುರಂಗ, ವಿಷ್ಣುನಾಯ್ಕ್, ಮುದಬಸಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
https://www.suddikanaja.com/2021/06/04/current-shock-death/