ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಇತ್ತೀಚೆಗೆ ವಾಜಪೇಯಿ ಬಡಾವಣೆಯ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದ್ದಿದರೂ ಅಕ್ರಮ -ಸಕ್ರಮ ಮಾಡಲು ಹೊರಟಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾ ಹಜಾರೆ ಹೋರಾಟ ಸಮಿತಿ ಮುಖ್ಯಸ್ಥ ಅಶೋಕ್ ಯಾದವ್, ಸಕ್ರಮಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು. ನಿವೇಶನಗಳ ಮರು ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದರು.
ವಾಜಪೇಯಿ ಬಡಾವಣೆ ನಿವೇಶನ ಅವ್ಯವಹಾರ, ಪುನರ್ ತನಿಖೆಗೆ ಒತ್ತಾಯ, ಕಾರಣವೇನು ಗೊತ್ತಾ?
ಸರ್ಕಾರದ ನಿರ್ಧಾರಕ್ಕೆ ವಿರೋಧಿಸಲು ಕಾರಣವೇನು?
ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತ ಸಂಸ್ಥೆಯೇ ವರದಿ ನೀಡಿದೆ. ಹೀಗಿದ್ದರೂ ತಪ್ಪಿಸ್ಥರ ವಿರುದ್ದ ಕ್ರಮ ಕೈಗೊಳ್ಳದೇ ಅಕ್ರಮ-ಸಕ್ರಮ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ತನಿಖಾ ವರದಿ ಕೂಡ ಸರ್ಕಾರದ ಕೈಸೇರಿದೆ. ಅದರಲ್ಲಿ 1,305 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ ಎಂದು ತಿಳಿಸಲಾಗಿದೆ. ತಾವೇ ನೇಮಿಸಿದ ಲೋಕಾಯುಕ್ತ ವರದಿಯಲ್ಲಿ ಸಂಪೂರ್ಣ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸದರೂ ಸರ್ಕಾರ ಆ ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ತಪದಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಇನ್ನಷ್ಟು ವ್ಯಾಪಕವಾಗಿ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಡಾ. ಚಿಕ್ಕಸ್ವಾಮಿ, ಚನ್ನವೀರಪ್ಪ, ಶಿವಕುಮಾರ್, ಪ್ರೊ. ಕಲ್ಲನ್, ದೇವೇಂದ್ರಪ್ಪ ಉಪಸ್ಥಿತರಿದ್ದರು.
ವಾಜಪೇಯಿ ಬಡಾವಣೆ ಸಮಸ್ಯೆ 3 ತಿಂಗಳಲ್ಲಿ ಇತ್ಯರ್ಥ, ನಿವೇಶನ ಕೋರಿ ಸಲ್ಲಿಸಿದ ಎಷ್ಟು ಅರ್ಜಿಗಳಲ್ಲಿ ಲೋಪವಿದೆ ಗೊತ್ತಾ?