ಸುದ್ದಿ ಕಣಜ.ಕಾಂ | KARNATAKA | CRIME
ಶಿವಮೊಗ್ಗ: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಮತ್ತೊಂದು ಹಂತದ ಕಂಟಕ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಖುದ್ದು ಗೃಹ ಸಚಿವರೇ ತಿಳಿಸಿದ್ದಾರೆ.
https://www.suddikanaja.com/2021/08/09/ganja-raid-in-bhadravthi/
ನಗರದ ಮಾಚೇನಹಳ್ಳಿ ಕೆ.ಎಸ್.ಆರ್.ಪಿ. 8ನೇ ಬಟಾಲಿಯನ್ ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದೇನು?
ಕೆಲವು ತಿಂಗಳುಗಳ ಹಿಂದೆ ಮಾದಕ ದ್ರವ್ಯ ಸೇವನೆಯಿಂದ ಸುದ್ದಿಯಾಗಿದ್ದ ಚಿತ್ರನಟಿಯರು ಮಾದಕ ದ್ರವ್ಯ ಸೇವಿಸಿದ್ದುದರ ಬಗ್ಗೆ ಹೈದ್ರಾಬಾದ್ ಫೋರೆನ್ಸಿಕ್ ಲ್ಯಾಬ್ ನಿಂದ ದೃಢೀಕರಿಸಿದ ಅಧಿಕೃತ ವರದಿ ಬಂದಿದೆ. ಇದರಿಂದಾಗಿ ಪ್ರಕರಣ ಇನ್ನಷ್ಟು ಗಟ್ಟಿಗೊಂಡಿದೆ ಎಂದು ಹೇಳಿದರು.
ಪಾಸಿಟಿವ್ ಬಂದಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಪ್ರಕರಣದಲ್ಲಿರುವ ಆರೋಪಿಗಳು ರಂಗೋಲಿಯ ಕೆಳಗೆ ನುಸುಳುವ ಕೆಲಸ ಮಾಡುತಿದ್ದಾರೆ. ಅವರನ್ನು ಶೀಘ್ರವೇ ನಿಯಮಾನುಸಾರ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು. ಎಷ್ಟೇ ಒತ್ತಡ ಬಂದರೂ ಅಪರಾಧಿಗಳನ್ನು ಬಿಡುವುದಿಲ್ಲ ಎಂದರು.
https://www.suddikanaja.com/2021/03/16/ganja-supply-4-accused-arrested-in-shikaripura/
ರಾಜ್ಯದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಸಾಗಾಣೆ ಮತ್ತು ಅಕ್ರಮ ಮಾರಾಟದ ಕುರಿತು ಪೊಲೀಸ್ ಇಲಾಖೆಯಿಂದ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗುವ ಯಾವುದೇ ಚಟುವಟಿಕೆಯನ್ನು ನಿಯಂತ್ರಿಸುವುದು ಹಾಗೂ ವ್ಯಕ್ತಿಯನ್ನು ದಂಡನೆಗೆ ಗುರಿಪಡಿಸಲಾಗುವುದು. ಅದಕ್ಕಾಗಿ ಇಲಾಖೆಯಲ್ಲಿ ಪ್ರತ್ಯೇಕವಾದ ತಂಡವನ್ನು ರಚಿಸಲಾಗಿದೆ ಎಂದರು.
ಫೋರೆನ್ಸಿಕ್ ಲ್ಯಾಬ್ ಉನ್ನತೀಕರಣ
ರಾಜ್ಯದಲ್ಲಿಯೂ ಫೋರೆನ್ಸಿಕ್ ಲ್ಯಾಬ್ ಅನ್ನು ಅತ್ಯಾಧುನಿಕ ರೀತಿಯಲ್ಲಿ ಉನ್ನತೀಕರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಸೇರಿದಂತೆ ಕೆ.ಎಸ್.ಆರ್.ಪಿ.ಯ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.
https://www.suddikanaja.com/2020/11/12/new-police-station-and-facility-to-police-department/