ಸುದ್ದಿ ಕಣಜ.ಕಾಂ | DISTRICT | FOREST
ಶಿವಮೊಗ್ಗ: ಸಾಗರ ಅರಣ್ಯ ವಿಭಾಗ, ಸೊರಬ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಹಿಡುವಳಿ/ಖಾಸಗಿ/ಖಾನೇಷುಮಾರಿ ಜಮೀನಿನ ಪ್ರದೇಶದಲ್ಲಿರುವ ಮರಗಳನ್ನು ಮಾಫಿಪಾಸ್ ಮೂಲಕ ಕಡಿತಲೆ ಮಾಡಿ ಸಾಗಾಣಿಕೆ ಮಾಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.
https://www.suddikanaja.com/2021/08/02/fire-accident-due-to-power-short-circuit/
ಮಳೆ ಹಿನ್ನೆಲೆ ರಸ್ತೆ ಕುಸಿಯುವ ಭೀತಿ
ಸಾಗರ ಅರಣ್ಯ ವಿಭಾಗದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ಕಡಿತಲೆ ಮಾಡಿದ ಮರಗಳ ಉತ್ಪನ್ನಗಳನ್ನು ಭಾರೀ ವಾಹನಗಳ ಮೂಲಕ ಸಾಗಾಣಿಕೆ ಮಾಡುತ್ತಿರುವುದರಿಂದ ರಸ್ತೆ ಕುಸಿಯುವ ಸಂಭವ ಇದೆ. ಆದ್ದರಿಂದ, ರಸ್ತೆ ಕುಸಿತ, ಸಾರ್ವಜನಿಕ ಆಸ್ತಿಪಾಸ್ತಿ, ಜೀವ ಹಾನಿ ತಡೆಗಟ್ಟುವ ದೃಷ್ಟಿಯಿಂದ ಹಾಗೂ ಸಂಭವಿಸಬಹುದಾದ ಇತರೆ ಘಟನೆಗಳನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ.
ಎಷ್ಟು ದಿನಗಳ ನಿರ್ಬಂಧ ಮುಂದಿವರಿಯಲಿದೆ?
ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115ರ ಅನ್ವಯ ತಾತ್ಕಾಲಿಕವಾಗಿ ಆಗಸ್ಟ್ 19ರಿಂದ ಸೆಪ್ಟಂಬರ್ 30ರ ವರೆಗೆ ಸಾಗರ ಅರಣ್ಯ ವಿಭಾಗ, ಸೊರಬ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬೀಳುತ್ತಿರುವ ದಿವಸಗಳಲ್ಲಿ ಹಾಗೂ ಮಳೆ ಬಿದ್ದ 2 ದಿನಗಳವರೆಗೆ ಅಧಿಕ ಭಾರ ಹೊಂದಿರುವ ಭಾರೀ (ಲಾರಿ) ವಾಹನಗಳ ಮೂಲಕ ಮರ ಅಥವಾ ನಾಟಾ ಸಾಗಾಣಿಕೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
https://www.suddikanaja.com/2021/07/09/ganja-arrest/