ಸುದ್ದಿ ಕಣಜ.ಕಾಂ | DISTRICT | POLITICS
ಶಿವಮೊಗ್ಗ: ಸಾಗರ ಕ್ಷೇತ್ರದ ಶಾಸಕ ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ಆರೋಪ ಪ್ರತ್ಯಾರೋಪ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ತಾರಕಕ್ಕೇರಿದ್ದ ವಾಗ್ವಾದ ಮತ್ತೆ ಮುನ್ನೆಲೆಗೆ ಬಂದಿದೆ.
ವೇದಿಕೆಯ ಮೇಲೆ ಕಣ್ಣೀರಿಟ್ಟ ಬೇಳೂರು, ‘ದೀವರ ಅಭಿವೃದ್ಧಿಗೆ ಧರ್ಮಗುರು ಅಗತ್ಯ’
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ‘ಸಾಗರ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಟು ಆಗುತ್ತಿದೆ. ಸಾಂಸ್ಕೃತಿಕ ನಾಡಾಗಿದ್ದ ಸಾಗರದಲ್ಲಿ ಪ್ರತಿ ಹೆಜ್ಜೆಗೂ ಬಾರ್ ಸಿಗುತ್ತವೆ. ಓಸಿ, ಗಾಂಜಾ ತಲೆ ಎತ್ತಿದೆ. ಇದಕ್ಕೆಲ್ಲ ಇಲ್ಲಿನ ಶಾಸಕರ ಸಹಕಾರವೇ ಕಾರಣವಾಗಿದೆ. ಅವರು ಸಾಗರವನ್ನು ಕುಡುಕರ ಸಾಮ್ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಆಪಾದಿಸಿದರು.
READ | ಬಾಲಕಿಯನ್ನು ಚುಡಾಯಿಸಿದವರಿಗೆ ಬುದ್ಧಿ ಹೇಳಿದಕ್ಕೆ ಪರಿಸರ ಪ್ರೇಮಿಯ ಮೇಲೆ ನಡೀತು ಹಲ್ಲೆ
ಬೇಳೂರು ಮಾಡಿದ ಟಾಪ್ 5 ಆರೋಪಗಳು
- ನೆಹರೂ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ. ರವಿಗಿಲ್ಲ. ಆರೋಪಕ್ಕೂ ಮುಂಚೆ ತಮ್ಮ ಪಕ್ಷದಲ್ಲಿರುವ ಬ್ಲೂ ಬಾಯ್ಸ್, ಜರಾಕಿಹೊಳಿ ಅಂತಹವರನ್ನು ನೋಡಲಿ.
- ಶಿವಮೊಗ್ಗ ಜಿಲ್ಲೆಯವರೇ ಆದ ಯಡಿಯೂರಪ್ಪ ಅವರನ್ನು ಬಿಜೆಪಿಯವರೆಲ್ಲರು ಸೇರಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅವರು ತ್ಯಾಗ ಮಾಡಿದ್ದಾರೆ ಎಂದಾದಲ್ಲಿ ಕಣ್ಣೀರು ಹಾಕಿದ್ದೇಕೆ?
- ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯ ಬದುಕುವ ಸ್ಥಿತಿಯೇ ಇಲ್ಲ. ತೈಲ ಬೆಲೆ ಏರಿಕೆಯಿಂದಾಗಿ ಕಷ್ಟಪಡುವಂತಾಗಿದೆ. ಇದೆನಾ ಮೋದಿ ಅವರ ಅಚ್ಛೇ ದಿನ್?
- ಬಿಜೆಪಿಯವರು ಜನಾಶೀರ್ವಾದ ಯಾತ್ರೆ ವೇಳೆ ಇಲ್ಲದ ಕೊರೊನಾ ಸೋಂಕಿನ ಭೀತಿ ಗಣೇಶೋತ್ಸವಕ್ಕೇಕೆ, ಬಿಜೆಪಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಪಕ್ಷಕ್ಕೊಂದು ಜನರಿಗೊಂದು ನ್ಯಾಯವೇ?
- ಕರ್ನಾಟದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ನೆರೆಯಿಂದ ನಷ್ಟ ಉಂಟಾದವರಿಗೆ ಎರಡು ವರ್ಷಗಳಿಂದ ಪರಿಹಾರ ಬಂದಿಲ್ಲ. ಬಿದ್ದ ಮನೆಗಳು ರಿಪೇರಿಯಾಗಿಲ್ಲ. ಆದೇಶ ಕಾಗದಕ್ಕೆ ಸೀಮಿತವಾಗಿವೆ.
ಹೆಬ್ಬೆಟ್ಟು ಹೇಳಿಕೆಗೆ ಬೇಳೂರು ಸಮರ್ಥನೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕುರಿತು ನಾನು ‘ಹೆಬ್ಬೆಟ್ಟು’ ಹೇಳಿಕೆಗೆ ಸಮರ್ಥನೆ ನೀಡಿರುವ ಬೇಳೂರು, ‘ಅದನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಹೆಬ್ಬೆಟ್ಟು ಎಂದು ಹೇಳಿರುವುದು ಅವರು ರಬ್ಬರ್ ಸ್ಟ್ಯಾಂಪ್ ಎಂಬ ಅರ್ಥದಲ್ಲಿ’ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ಸಾಗರದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಚಿನ್ಮಯ್ ಉಪಸ್ಥಿತರಿದ್ದರು.
ಈಡಿಗ ಸಮುದಾಯದಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ನಡೀತು ಪ್ರತಿಭಟನೆ, ಇನ್ನೇನು ಬೇಡಿಕೆಗಳಿವೆ