ಸುದ್ದಿ ಕಣಜ.ಕಾಂ | TALUK | CRIME
ಸೊರಬ: ತಾಲೂಕಿನ ಕತವಾಯಿ ಗ್ರಾಮದಲ್ಲಿ ಜಮೀನಿನ ಬೇಲಿಗೆ ಹಾಕಿರುವ ತಂತಿಯಿಂದ ವಿದ್ಯುತ್ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಸುಜಾತ (40) ಮೃತಪಟಿದ್ದಾರೆ. ನೀರು ಹಾಯಿಸುವುದಕ್ಕಾಗಿ ಮಂಗಳವಾರ ಮಧ್ಯಾಹ್ನ ಜಮೀನಿಗೆ ಹೋಗಿದ್ದು, ಬದುವಿನ ಮೇಲೆ ಹಸಿ ಇದ್ದುದ್ದರಿಂದ ಕಾಲು ಜಾರಿದೆ. ತಕ್ಷಣ ಪಕ್ಕವೇ ಇದ್ದ ತಂತಿ ಬೇಲಿಯನ್ನು ಹಿಡಿದಿದ್ದಾರೆ. ಅದರಿಂದ ವಿದ್ಯುತ್ ಪ್ರವಹಿಸಿ ಮಹಿಳೆ ಮೃತಪಟ್ಟಿದ್ದಾರೆ.