ಸುದ್ದಿ ಕಣಜ.ಕಾಂ | DISTRICT | SMART CITY
ಶಿವಮೊಗ್ಗ: ಪಟ್ಟಣದ ಎಲ್.ಬಿ.ಎಸ್ ನಗರದಿಂದ ಒಂದು ಕಿ.ಮೀ ಉದ್ದದಷ್ಟು ₹59 ಲಕ್ಷ ಮೊತ್ತದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಅಲಂಕಾರಿಕ ದೀಪಗಳನ್ನು ಉದ್ಘಾಟಿಸಲಾಯಿತು.
https://www.suddikanaja.com/2021/08/24/bike-invention/
ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ಅಲಂಕಾರಿಕ ಬೀದಿ ದೀಪವನ್ನು ಅಳವಡಿಸುವ ಕಾಮಗಾರಿಯನ್ನು ಕೆಶಿಪ್ ವತಿಯಿಂದ ನಿರ್ವಹಿಸಲು ಒಟ್ಟು ₹ 7.12 ಕೋಟಿ ಖರ್ಚಾಗಿರುತ್ತದೆ ಎಂದು ತಿಳಿಸಿದರು.
ಶಿಕಾರಿಪುರ ಶಿರಾಳಕೊಪ್ಪ ಮತ್ತು ಸೊರಬ ತಾಲೂಕಿನ ಅನವಟ್ಟಿಯಲ್ಲಿ ಕೂಡ ಇದೆ ಮಾದರಿಯಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. 80 ಕಿ.ಮೀ. ಉದ್ದದ ರಸ್ತೆಗೆ ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಟ್ರಾಫಿಕ್ ಕಂಟ್ರೋಲ್ ಇರುವ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಅದರಲ್ಲಿ ಸಿಸಿ ಟಿವಿ ವ್ಯವಸ್ಥೆ ಮತ್ತು ವಿದೇಶದ ಮಾದರಿಯಲ್ಲಿ ಈ ರಸ್ತೆಯನ್ನು ಜೊತೆಗೆ ನಮ್ಮ ಶಿವಮೊಗ್ಗವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಕಾಂತೇಶ್ ಈಶ್ವರಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಎನ್.ಚನ್ನಬಸಪ್ಪ, ಬಳ್ಳಿಕೆರೆ ಸಂತೋಷ್ ಉಪಸ್ಥಿತರಿದ್ದರು.
https://www.suddikanaja.com/2021/05/02/cycle-yatra-to-ayodhya-rama-mandira/