ಸುದ್ದಿ ಕಣಜ.ಕಾಂ | DISTRICT | GANESH FESTIVAL
ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಹಣತೆ ತಯಾರಕರ ಬದುಕಲ್ಲಿ ಮೂಡದ ದೀಪಾವಳಿ ಬೆಳಕು, ವೋಕಲ್ ಫಾರ್ ಲೋಕಲ್ ಇವರಿಗೆ ಅನ್ವಯ ಇಲ್ಲವೆ?
ರೋಗ ನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತವಾದ ಗೋಧಿ ಅಥವಾ ರಾಗಿ ಹಿಟ್ಟು ಸೇರಿಸಿ ಸಣ್ಣ ಸಣ್ಣ ಗಣೇಶನ ಪ್ರತಿಮೆ ತಯಾರಿಸಿ ಪೂಜಿಸುವುದರಿಂದ ಕೋವಿಡ್-19 ಅನ್ನು ಎದುರಿಸಲು ಸಂಕಲ್ಪ ಮಾಡುವಂತೆ ಕರೆ ನೀಡಲಾಗಿದೆ.
ವಿಶ್ವ ದಾಖಲೆಯ ಪ್ರಯತ್ನ
ಸಾರ್ವಜನಿಕರು ಇಂತಹ ಪುಟ್ಟ ಪುಟ್ಟ ಪ್ರತಿಮೆಗಳನ್ನು ತಯಾರಿಸಿ, ಪೂಜಿಸಿ ಮನೆಯ ಆವರಣದಲ್ಲಿ ವಿಸರ್ಜನೆ ಮಾಡಿ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಅಭಿಯಾನದಲ್ಲಿ 10 ಲಕ್ಷ ಅರಿಶಿನ ಗಣೇಶ ತಯಾರಿಕಾ ಅಭಿಯಾನದ ಮೂಲಕ ವಿಶ್ವ ದಾಖಲೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಈ ಜಾಲತಾಣಕ್ಕೆ ಅಪ್ ಲೋಡ್ ಮಾಡಿ
ಸಾರ್ವಜನಿಕರು ತಯಾರಿಸಿದ ಅರಿಶಿನ ಗಣೇಶ ವಿಗ್ರಹಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಲತಾಣ http://kspcb.karnataka.gov.in ರಲ್ಲಿ ಪರಿಸರ ಸ್ನೇಹಿ ಅರಿಶಿನ ಗಣೇಶ ವಿಗ್ರಹದ ಛಾಯಾಚಿತ್ರವನ್ನು ಅಪ್ ಲೋಡ್ ಮಾಡಿ ಆಕರ್ಷಕ ಬಹುಮಾನವನ್ನು ಗೆಲ್ಲಬಹುದಾಗಿದೆ ಎಂದು ತಿಳಿಸಿದ್ದಾರೆ.