ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಸಮುದ್ರದ ಮೀನಿನ ಮಾರಾಟ ಮಾಡಲು ಅಗತ್ಯವಿರುವ ಅಂಗಡಿಯ ಟೆಂಡರ್ ಕೊಡಿಸುವುದಾಗಿ ಭರವಸೆ ನೀಡಿ ಮಹಿಳೆಯೊಬ್ಬರಿಗೆ ₹2 ಲಕ್ಷ ವಂಚನೆ ಮಾಡಲಾಗಿದ್ದು, ಪ್ರಕರಣವು ಠಾಣೆ ಮೆಟ್ಟಿಲೇರಿದೆ.
ನ್ಯೂ ಮಂಡ್ಲಿಯ ಆಯುಷಾ ತಬಸುಮ್ ಎಂಬಾಕೆಯೇ ಮೋಸ ಹೋದ ಮಹಿಳೆ. ಅಬೂಬಕರ್ ಅಹಮದ್, ಅಬೂಬಕರ್ ಸಿದ್ದಿಕಿ, ಜೀಯಾವುಲ್ಲಾ ಹಸನ್, ಫೈರೋಜ್ ಖಾನ್ ಎಂಬುವವರು ಅಂಗಡಿಗಾಗಿ ₹4 ಲಕ್ಷ ಬೇಡಿಕೆ ಇಡಲಾಗಿತ್ತು. ಮುಂಗಡವಾಗಿ ₹2 ಲಕ್ಷ ಪಡೆಯಲಾಗಿದೆ. ನಂತರ ಅವರು ತಲೆಮರೆಸಿಕೊಂಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.