ಸುದ್ದಿ ಕಣಜ.ಕಾಂ | TALUK | CRIME
ಶಿವಮೊಗ್ಗ: ಗ್ರಾಮ ಠಾಣಾ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ವಾಮಾಚಾರ ಮಾಡಿರುಗ ಘಟನೆ ಗುರುವಾರ ನಡೆದಿದೆ.
ಚೋರಡಿ ಗ್ರಾಪಂ ಕಚೇರಿ ಎದುರು ವಾಮಾಚಾರದ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ತಾಲೂಕಿನ ಚೋರಡಿ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಪಂಚಾಯಿತಿಯ ನಿರಂಜನ್ ಗೌಡ ಎಂಬುವವರ ಮನೆಯ ಎದುರುಗಡೆ ಕರಿ ಮತ್ತು ಬಿಳಿ ಎಳ್ಳು ಹಾಕಿ ವಾಮಾಚಾರ ಮಾಡಲಾಗಿದೆ.
ಆರೋಪಿಗಳನ್ನು ಬಂಧಿಸಿದ ಕುಂಸಿ ಪೊಲೀಸರು
ಚೋರಡಿ ಗ್ರಾಮದ ನಿವಾಸಿ ಮಹೇಶ್ವರ್ ಹಾಗೂ ಮಲ್ಲೇಶಪ್ಪ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ
ಗ್ರಾಮ ಠಾಣಾ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದಕ್ಕೆ ಅಲ್ಲಿಯ ಪಿಡಿಒ ಹಾಗೂ ಸದಸ್ಯರು ತಡೆಯೊಡ್ಡಿದ್ದರು. ಇದರಿಂದಾಗಿ ವಾಮಾಚಾರದ ಮೊರೆ ಹೋಗಿದ್ದು, ಬೆಳಗ್ಗೆ ಪಂಚಾಯಿತಿ ಕಚೇರಿಯ ಮುಂದೆ ಎಳ್ಳು ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಕ್ಷಣ ಇವರಿಬ್ಬರ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
https://www.suddikanaja.com/2020/12/01/barekal-batteri-main-gate-wrack-for-treasure/