ಸುದ್ದಿ ಕಣಜ.ಕಾಂ | CITY | HEALTH
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ವಿಶ್ವ ಮರೆವಿನ ಕಾಯಿಲೆಯ ದಿನಾಚರಣೆ’ ಅಂಗವಾಗಿ ಸೆಪ್ಟೆಂಬರ್ 30ರ ವರೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಮೆದುಳು ಮತ್ತು ನರ ರೋಗ ತಜ್ಞೆ ಡಾ. ಕೆ.ಜಿ.ರೂಪಾ ಹೇಳಿದರು.
https://www.suddikanaja.com/2021/04/30/mandatory-to-display-duty-doctor-names-before-ward-board/
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸೆಪ್ಟೆಂಬರ್ 31ರಂದು ವಿಶ್ವ ಮರೆವಿನ ಕಾಯಿಲೆ ದಿನಾಚರಣೆ ಇದೆ. ಹೀಗಾಗಿ, ಸೆ.6 ರಿಂದ 30ರ ವರೆಗೆ ಮರೆವಿನ ಕಾಯಿಲೆ ಸಂಬಂಧ ವಿಶೇಷ ಶಿಬಿರ ಆಯೋಜಿಸಲಾಗಿದೆ. ಇದು ಬೆಳಗ್ಗೆ 10ರಿಂದ ಸಂಜೆಯವರೆಗೆ ನನಡೆಯಲಿದೆ. ಕಾಯಿಲೆ ಲಕ್ಷಣ ಇರುವವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶೇ.30ರಷ್ಟು ರಿಯಾಯಿತಿ
ಕಾಯಿಲೆಯ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರಿಗೆ ತೋರಿಸಿದರೆ ತುಂಬಾ ಅಪಾಯಗಳಿಂದ ಹೊರಬರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಈ ವಿಶೇಷ ಶಿಬಿರ ಆಯೋಜಿಸಿದ್ದು, ವೈದ್ಯರು ಸೂಚಿಸುವ ವಿವಿಧ ಪರೀಕ್ಷೆಗಳ ಮೇಲೆ ಶೇ.30 ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತದೆ ಎಂದರು.
ಆಸ್ಪತ್ರೆಯ ಎಂ.ಡಿ ವರ್ಗೀಸ್ ಪಿ. ಜಾನ್, ವ್ಯವಸ್ಥಾಪಕ ಎಸ್.ವಿ. ರಾಜಾಸಿಂಗ್ ಇದ್ದರು.
https://www.suddikanaja.com/2021/05/16/aware-of-black-fungus/