ಸುದ್ದಿ ಕಣಜ.ಕಾಂ | TALUK | EDUCATION
ತುಮರಿ(ಸಾಗರ): ಜನರಿಗೆ ಅರಿವನ್ನು ಹಂಚಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಜ್ಞಾನದ ಆಸರೆ ಆಗಬೇಕಿದ್ದ ತುಮರಿಯ ಸಾರ್ವಜನಿಕ ಗ್ರಂಥಾಲಯ ಬಾಗಿಲು ಮುಚ್ಚಿ ಮೂರು ತಿಂಗಳಾಗಿದೆ!
ತುಮರಿ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ಜನ ಓದುಗರನ್ನು ಹೊಂದಿದ್ದ ಗ್ರಾಮ ಪಂಚಾಯಿತಿ ಗ್ರಂಥಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೂ ಗ್ರಂಥ ಪಾಲಕರ ನೇಮಕಾತಿ ಇಲ್ಲದೆ ಅಕ್ಷರ ಪ್ರಿಯರಿಗೆ ನಿರಾಶೆ ಮೂಡಿಸಿದೆ. ಈ ಬಗ್ಗೆ ತಾತ್ಕಾಲಿಕ ಕರ್ಮಕ್ಕೂ ತುಮರಿ ಗ್ರಾಮ ಪಂಚಾಯಿತಿ ಮುಂದಾಗದೇ ಇರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯ ಮೆಟ್ಟಿಲು ಹತ್ತಿದ ನಿವೇಶನ ವಿಚಾರ
ತುಮರಿ ಗ್ರಾಮ ಪಂಚಾಯಿತಿ ಸಾರ್ವಜನಿಕ ಗ್ರಂಥಾಲಯ ಜಾಗ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣ ಆಗಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ 2016ರಲ್ಲಿ ಸಲ್ಲಿಕೆ ಆಗಿ ಜಾಗ ಗುರುತಿಸುವಿಕೆಗೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಗ್ರಂಥಾಲಯ ನಿವೇಶನದಲ್ಲಿ ಇದ್ದ ತುಮರಿ ಗ್ರಾಪಂ ವಾಣಿಜ್ಯ ಕಟ್ಟಡ ತೆರವಿಗೆ ಆದೇಶ ಮಾಡಿತ್ತು.
READ | ಅರ್ಧ ಲಕ್ಷದ ರೂ. ದಾಟಿದ ಅಡಿಕೆ ದರ, ಬೆಳೆಗಾರರ ಮೊಗದಲ್ಲಿ ಮಂದಹಾಸ, ಒಂದೇ ದಿನದಲ್ಲಿ 3 ಸಾವಿರ ರೂ. ಏರಿಕೆ!
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ವೇ ಪ್ರಕ್ರಿಯೆ ಮುಗಿಸಿ ನಿವೇಶನ ಗುರುತು ಮಾಡಲಾಗಿತ್ತು. ಗ್ರಂಥಾಲಯ ಇಲಾಖೆಯಿಂದ ₹15 ಲಕ್ಷ ಅನುದಾನ ಮಂಜೂರಾಗಿ ಹೊಸ ಕಟ್ಟಡ ನಿರ್ಮಾಣವಾಗಿತ್ತು. ಹೊಸ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸಲು ಅಗತ್ಯವಾದ ಪೀಠೋಪಕರಣ ಇತ್ಯಾದಿ ಇಲಾಖೆ ಒದಗಿಸಿದ ಬೆನ್ನಲ್ಲೇ ಸರ್ಕಾರದಿಂದ ಗ್ರಾಮ ಪಂಚಾಯಿತಿಗೆ ನೇರ ಉಸ್ತುವಾರಿಯ ಹೊಣೆಯನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು.
READ | ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್, ಇನ್ನು ಎಷ್ಟು ದಿನ ಬರಲಿದೆ ಮಳೆ, ಹವಾಮಾನ ಇಲಾಖೆ ಹೇಳಿದ್ದೇನು?
ಹೊಸ ನೇಮಕಾತಿಗೆ ಸಾರ್ವಜನಿಕರ ಆಗ್ರಹ
ತುಮರಿ ಗ್ರಾಮ ಪಂಚಾಯಿತಿ ನಿರ್ವಹಣೆಯ ಈ ಗ್ರಂಥಾಲಯದ ಗ್ರಂಥ ಪಾಲಕರ ಹುದ್ದೆಯಲ್ಲಿದ್ದ ನೌಕರರು ನಿವೃತ್ತಿ ಬೆನ್ನಲೇ ಹೊಸ ನೇಮಕಾತಿ ಮಾಡಿದ್ದು, ನೂತನ ಗ್ರಂಥಪಾಲಕರು ರಾಜೀನಾಮೆಯಿಂದ ಹುದ್ದೆ ತೆರವಾಗಿದೆ. ಈ ಕಾರಣದಿಂದಾಗಿ, ಗ್ರಂಥಾಲಯ ಸೇವೆ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದೆ. ಹೊಸ ನೇಮಕಾತಿ ಆಗುವವರೆಗೆ ಪಂಚಾಯತ್ ನೌಕರರನ್ನು ಹೆಚ್ಚುವರಿ ಸೇವೆಗೆ ನಿಯುಕ್ತಿಗೊಳಿಸಬೇಕು. ಇಲ್ಲವೇ ತಾತ್ಕಾಲಿಕ ನೇಮಕಾತಿ ಮಾಡಿ ಓದುಗರಿಗೆ ಗ್ರಂಥಾಲಯ ತೆರೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ | ಸುಕುಮಾರ್ ಎಂ. ಕುದರೂರು
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಜಾಗ ಒತ್ತುವರಿ ತಡೆಗೆ ಹೈಕೋರ್ಟ್ ಖಡಕ್ ವಾರ್ನಿಂಗ್, ಕಾರಣವೇನು ಗೊತ್ತಾ?