ಸುದ್ದಿ ಕಣಜ.ಕಾಂ | DISTRICT | CRIME
ಶಿವಮೊಗ್ಗ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹುಣಸೋಡು ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಆರನೇ ವ್ಯಕ್ತಿಯ ಶವದ ಗುರುತು ಏಳೂವರೆ ತಿಂಗಳ ಬಳಿಕ ಪತ್ತೆಯಾಗಿದೆ.
ಮೃತನನ್ನು ಭದ್ರಾವತಿಯ ಕೆ.ಎಚ್.ನಗರದ ಆಟೋ ಚಾಲಕ ಶಶಿ ಅಲಿಯಾಸ್ ದೇವೇಂದ್ರ(32) ಎಂಬುವುದು ಪತ್ತೆಯಾಗಿದೆ.
2021ರ ಜನವರಿ 21ರಂದು ರಾತ್ರಿ 10.20 ಗಂಟೆ ಸುಮಾರಿಗೆ ಕ್ರಷರ್ ನಲ್ಲಿ ಸ್ಫೋಟ ಸಂಭವಿಸಿದ್ದು, ಆರು ಜನ ಮೃತಪಟ್ಟಿದ್ದರು. ಅದರಲ್ಲಿ ಐವರ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಆರನೇ ವ್ಯಕ್ತಿಯ ದೇಹವೂ ಛಿದ್ರವಾಗಿದ್ದ ಪರಿಣಾಮ ಪರೀಕ್ಷೆಗೋಸ್ಕರ ಕಳುಹಿಸಲಾಗಿತ್ತು.
ಹುಣಸೋಡು ಸ್ಫೋಟ | ಭದ್ರಾವತಿಯ ಇಬ್ಬರು ಸೇರಿ ಆರು ಜನರ ಸಾವು, ಪತ್ತೆಯಾಗದ ಇನ್ನೊಬ್ಬರ ಗುರುತು
ತಾಲೂಕಿನ ಕಲ್ಲುಗಂಗೂರು ಗ್ರಾಮದ ಸರ್ವೇ ನಂಬರ್ 2ರ ಜಮೀನಿನಲ್ಲಿರುವ ಎಸ್.ಎಸ್. ಕ್ರಷರ್ ಬಳಿ ಸ್ಫೋಟಕಗಳು ಸ್ಫೋಟಗೊಂಡಿದ್ದು, ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 286, 304 ಐಪಿಸಿ ಮತ್ತು 9ಬಿ ಎಕ್ಸ್ ಫ್ಲೋಸಿವ್ ಕಾಯ್ದೆ 1884 ಮತ್ತು ಕಲಂ 5 ಎಕ್ಸ್ ಫ್ಲೋಸಿವ್ ಸಬ್ ಸ್ಟೇನ್ಸಸ್ ಕಾಯ್ದೆ 1908 ಪ್ರಕರಣ ದಾಖಲಾಗಿತ್ತು.
ಡಿ.ಎನ್.ಎ ವರದಿಯಿಂದ ಗೊತ್ತಾಯ್ತು ಗುರುತು
ಸದರಿ ಪ್ರಕರಣ ತನಿಖೆಯಲ್ಲಿ ಐದು ಜನರ ಮೃತದೇಹಗಳ ಗುರುತನ್ನು ಅವರ ಸಂಬಂಧಿಕರ ಮೂಲಕ ಪತ್ತೆ ಮಾಡಲಾಗಿರುತ್ತದೆ. ಇತರೆ ಮೃತದೇಹದ ಗುರುತು ಪತ್ತೆಗಾಗಿ ಸ್ಫೋಟದ ಸ್ಥಳದಲ್ಲಿ ದೊರೆತ ದೇಹದ ಭಾಗಗಳನ್ನು ಬೆಂಗಳೂರು ಮಡಿವಾಳದ ಎಫ್.ಎಸ್.ಎಲ್ ಗೆ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಡಿಎನ್.ಎ ವರದಿಯು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಪೊಲೀಸರು ಅಡ್ಡಿ, ಮರಣೋತ್ತರ ಪರೀಕ್ಷೆ ನಂತರ ಶವ ಹಸ್ತಾಂತರ