ಸುದ್ದಿ ಕಣಜ.ಕಾಂ | DISTRICT | GANESH FESTIVAL
ಶಿವಮೊಗ್ಗ: ಸುದೀರ್ಘ ಇತಿಹಾಸ ಹೊಂದಿರುವ ಹಾಗೂ ರಾಜ್ಯದ ಗಮನವನ್ನೇ ತನ್ನತ್ತ ಸೆಳೆಯುವ ಹಿಂದೂ ಸಂಘಟನೆಗಳ ಮಹಾ ಮಂಡಳ (ಹಿಂದೂ ಮಹಾಸಭಾ) ಗಣೇಶನ ರಾಜ ಬೀದಿ ಉತ್ಸವ ಈ ಸಲವೂ ರದ್ದು ಪಡಿಸಲಾಗಿದೆ.
https://www.suddikanaja.com/2021/01/06/hindu-and-muslim-leaders-protest-at-kote-doddapete-police-station/
ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಸರಳ ಗಣೇಶ ಹಬ್ಬ ಆಚರಣೆಗೆ ಸೂಚನೆ ನೀಡಿದ್ದು, ಹಾಗೂ ಸೋಂಕು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಡಿಮೆ ಆಗದೇ ಇರುವುದರಿಂದ ವಿಸರ್ಜನೆ ಪೂರ್ವ ಮೆರವಣಿಗೆ ಮಾಡುತ್ತಿಲ್ಲ.
ಈ ಗಣೇಶನ ರಾಜಬೀದಿ ಉತ್ಸವದಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಮೂಲಕ ಭಕ್ತಿ ಪ್ರದರ್ಶನ ಮಾಡುತ್ತಾರೆ. ಇಡೀ ನಗರವೇ ಹಬ್ಬದ ವಾತಾವರಣದಲ್ಲಿರುತ್ತದೆ. ಆದರೆ, ಕೋವಿಡ್ ಕಾರಣದಿಂದಾಗಿ ಕಳೆದ ಎರಡು ಸಹ ರಾಜಬೀದಿ ಉತ್ಸವ ರದ್ದು ಮಾಡಲಾಗಿತ್ತು.
10 ದಿನ ಗಣೇಶನ ಪೂಜೆ
ಕೋವಿಡ್ ಮಾರ್ಗಸೂಚಿ ಅನ್ವಯ ಗಣೇಶನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರ ಐದು ದಿನಗಳಿಗೆ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಆದರೆ, ಹಿಂದೂ ಸಂಘಟನೆಗಳ ಮಹಾ ಸಭಾ ಗಣೇಶ 10 ದಿನಗಳ ನಂತರ ವಿಸರ್ಜನೆ ಆಗಲಿದೆ. ಪ್ರತಿವರ್ಷದ ಆಚರಣೆಯಂತೆ, ಅನಂತ ಚತುರ್ದಶಿಯಂದು ಸರಳ ವಿಸರ್ಜನೆ ಆಗಲಿದೆ.
https://www.suddikanaja.com/2021/03/16/maintenance-of-ram-mandir-is-next-challenge-said-pejavara-shri/