ಸುದ್ದಿ ಕಣಜ.ಕಾಂ | KARNTAKA | ART & CULTURE
ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಗಳ ಕಾರ್ಯಸ್ಥಾನವನ್ನು ವಲಯವಾರು ಸ್ಥಳಾಂತರ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕಲಾವಿದರಿಗೆ ಪ್ರಯೋಜನವಾಗಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ಶಿವಮೊಗ್ಗ ರಂಗಾಯಣ ಜಂಟಿ ನಿರ್ದೇಶಕರ ಹುದ್ದೆಯನ್ನು ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರ ಹುದ್ದೆಗೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ, ರಿಜಿಸ್ಟ್ರಾರ್ ಸಂಗೀತ ನೃತ್ಯ ಅಕಾಡೆಮಿಯ ಹುದ್ದೆಯನ್ನು ಶಿವಮೊಗ್ಗ ರಂಗಾಯಣದ ಆಡಳಿತ ಅಧಿಕಾರಿಯ ಹುದ್ದೆಗೆ ಸ್ಥಳಾಂತರಿಸಲಾಗಿದೆ.
ಕೇಂದ್ರ ಕಚೇರಿಗೆ ಬರುವುದು ತಪ್ಪಲಿದೆ
ಕಲಾವಿದರು, ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗೆ ಬಂದು ಎಡತಾಕಬೇಕಿತ್ತು. ಇದಕ್ಕೆ ಬರುವ ದಿನಗಳಲ್ಲಿ ತಡೆ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಇತ್ತೀಚೆಗೆ ನಡೆದ ಸಭೆಗಳಲ್ಲೂ ಜಂಟಿ ನಿರ್ದೇಶಕರ ನೇಮಕದ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಲಾಗಿತ್ತು. ಇದನ್ನು ಮನಗಂಡು ಸರ್ಕಾರ ಕ್ರಮಕೈಗೊಂಡಿದೆ.
READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ಶೀಘ್ರವೇ ಹುದ್ದೆಗಳು ಭರ್ತಿ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಅದರ ನಿಮಿತ್ತ ನಾನಾ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಅದಕ್ಕಾಗಿಯೇ ಶೀಘ್ರವೇ ನಿಂಟಿ ನಿರ್ದೇಶಕರು ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.
ಇದೇ ರೀತಿ, ಬೆಂಗಳೂರು, ಕಲಬುರ್ಗಿ, ಬೆಳಗಾವಿ ಮತ್ತು ಮೈಸೂರು ಕಂದಾಯ ವಲಯಗಳಿಗೆ ಸ್ಥಳಾಂತರ ಮಾಡಿ ಆದೇಶಿಸಲಾಗಿದೆ.
https://www.suddikanaja.com/2021/01/06/shivamogga-rangayana-tableau-in-republic-day-parade/