ಸುದ್ದಿ ಕಣಜ.ಕಾಂ | CITY | FIRE ACCIDENT
ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ತುಂಗಾ ಹೊಳೆಯ ಬೈಪಾಸ್ ಸೇತುವೆ ಬಳಿ ಶನಿವಾರ ನಡೆದ ಅಗ್ನಿ ಅವಘಡಕ್ಕೆ ಸೇದಿ ಬಿಸಾಕಿದ ಸಿಗರೇಟ್ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕವಾಗಿ ಆಗಿದಯೇ ಎಂಬುವುದು ಇನ್ನೂ ತಿಳಿದುಬಂದಿಲ್ಲ.
ಬೆಂಕಿ ಅನಾಹುತದ ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ
READ | ತುಂಗಾ ಹೊಳೆ ಬೆಂಕಿ ಅನಾಹುತ, ಸುಟ್ಟು ಭಸ್ಮವಾದ ಸ್ಮಾರ್ಟ್ ಸಿಟಿಗೆ ಸೇರಿದ 60 ಲಕ್ಷ ಮೌಲ್ಯದ ಕೇಬಲ್ಸ್
ಸ್ಮಾರ್ಟ್ ಸಿಟಿಗೆ ಸೇರಿದ ಓಎಫ್ಸಿ ಕೇಬಲ್ ಗಳು ಸುಟ್ಟು ಭಸ್ಮವಾಗಿದ್ದು, ಅಂದಾಜು 60 ಲಕ್ಷ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ. ಘಟನಾ ಸ್ಥಳದಲ್ಲಿ ಸುಮಾರು 75ಕ್ಕೂ ಅಧಿಕ ಕೇಬಲ್ ಬಂಡಲ್ ಗಳು ಇದ್ದವು ಎನ್ನಲಾಗಿದೆ. ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದ್ದು, ಇದುವರೆಗೆ ಗುತ್ತಿಗೆದಾರರ ಕಡೆಯಿಂದ ಯಾರೂ ದೂರು ನೀಡಲು ಬಂದಿಲ್ಲ.
65 ಕೇಬಲ್ ಬಂಡಲ್ ಗಳ ರಕ್ಷಣೆ
ಬೆಂಕಿ ಬಿದ್ದಿದ್ದೇ ಅಗ್ನಿಶಾಮಕ ಸಿಬ್ಬಂದಿ ಘಟನೆ ಸಂಭವಿಸಿದ ಜಾಗಕ್ಕೆ ಬಂದಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಅಲ್ಲಿದ್ದ 65 ಕೇಬಲ್ ಬಂಡಲ್ ಗಳನ್ನು ರಕ್ಷಿಸಿದ್ದಾರೆ. ಆದರೆ, ಬೆಂಕಿ ಹೆಚ್ಚಿಗೆ ಇದ್ದುದ್ದರಿಂದ 25ಕ್ಕೂ ಅಧಿಕ ಬಂಡಲ್ ಸುಟ್ಟು ಭಸ್ಮವಾಗಿವೆ. ಅದರ ಅವಶೇಷ ಕೂಡ ಉಳಿದಿಲ್ಲ. ಆದರೆ, 25ಕ್ಕೂ ಅಧಿಕ ಸುಟ್ಟಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.