ಸುದ್ದಿ ಕಣಜ.ಕಾಂ | DISTRICT | AGRICULTURE
ಶಿವಮೊಗ್ಗ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2021-22 ನೇ ಸಾಲಿಗೆ ಅಮೃತಧಾರೆ ಯೋಜನೆ ಅಡಿ ಇಲಾಖೆಯ ಜಾನುವಾರು ಕ್ಷೇತ್ರಗಳಲ್ಲಿ ಹುಟ್ಟುವ ಗಂಡು ಕರು, ಬೀಜದ ಹೋರಿಗಳನ್ನು ರೈತರಿಗೆ ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಫ್ರೂಟ್ಸ್ ಐಡಿ ಕಡ್ಡಾಯ, ಇನ್ನೇನು ಕರಾರು?
ಆಸಕ್ತ ರೈತರು ಕಡ್ಡಾಯವಾಗಿ ಫ್ರೂಟ್ಸ್ ಐ.ಡಿ ನಲ್ಲಿ ನೋಂದಯಿತರಾಗಿರಬೇಕು. ಆಯ್ಕೆಯನ್ನು ಸಂಬಂಧಿಸಿದ ಆಯಾ ವಿಧಾನಸಭೆ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯಿಂದ ಮಾಡಲಾಗುವುದು. ರೈತರಿಗೆ ಇಲಾಖೆಯಿಂದ ನಿಗದಿಪಡಿಸುವ ಮಾರಾಟ ಬೆಲೆಯಂತೆ ಷರತ್ತು ಮತ್ತು ನಿಬಂಧನೆಗಳೊಂದಿಗೆ ವಿತರಣೆ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಯು ಪಡೆದ ಗಂಡು ಕರುಗಳನ್ನು ಕನಿಷ್ಠ ಎರಡು ವರ್ಷಗಳ ಅವಧಿಯವರೆಗೆ ಸಂತಾನೋತ್ಪತ್ತಿಗಾಗಿ ಉಪಯೋಗಿಸಕ್ಕದ್ದು ಹಾಗೂ ಈ ಬಗ್ಗೆ ಮುಚ್ಚಳಿಕೆಯನ್ನು ಬರೆದುಕೊಡಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಯನ್ನು ಆಯಾ ತಾಲ್ಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಇವರನ್ನು ಸಂಪರ್ಕಿಸಿ ಪಡೆಯಬಹುದು.
ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಶಿವಮೊಗ್ಗ ತಾಲ್ಲೂಕು ಮೊಬೈಲ್ ಸಂಖ್ಯೆ 9482635093, ಭದ್ರಾವತಿ 9986624123, ತೀರ್ಥಹಳ್ಳಿ 9448792886, ಹೊಸನಗರ 9448165747, ಸಾಗರ 9448007542, ಸೊರಬ ತಾಲ್ಲೂಕು 9481255897, ಶಿಕಾರಿಪುರ 9482635093 ನ್ನು ಸಂಪರ್ಕಿಸಬಹುದೆಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಗಂದೂರು ಆಡಳಿತ ಮಂಡಳಿ ಕೊಂಚ ರಿಲೀಫ್, ಸರ್ಕಾರದ ನಡೆಯೇ ನಿರ್ಧರಿಸಲಿದೆ ಮುಂದಿನ ಬೆಳವಣಿಗೆ, ಮಾಹಿತಿಗಾಗಿ ಓದಿ