ಸುದ್ದಿ ಕಣಜ.ಕಾಂ | DISTRICT | CENTRAL JAIL
ಶಿವಮೊಗ್ಗ: ಕಾರಾಗೃಹದಲ್ಲಿ ಇದ್ದುಕೊಂಡೇ ಈ ಮಹಿಳೆಯರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.
ಇಗ್ನೋ ದೂರಶಿಕ್ಷಣ ವಿಭಾಗದಲ್ಲಿ 23 ವಿವಿಧ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪೂರೈಸಿರುವ ಮಹಿಳಾ ಸಜಾ ಬಂಧಿಗಳು ಶಿಕ್ಷಣ ಪಡೆದಿದ್ದಾರೆ.
ಕಾರಾಗೃಹದಲ್ಲಿ ಸುಮಾರು 60 ಜನ ಬಂಧಿ ನಿವಾಸಿಗಳಿಗೆ ಬ್ಯೂಟಿಷಿಯನ್ ಹಾಗೂ ಜಾಮ್, ಜೆಲ್ಲಿ ಕೆಚಪ್ ತಯಾರಿಕೆಯ 4 ತಿಂಗಳ ತರಬೇತಿಯನ್ನು ಆಯೋಜಿಸಿ ಬಂಧಿಗಳ ಬಿಡುಗಡೆಯ ನಂತರದ ಗೌರವಯುತ ಜೀವನಕ್ಕೆ ಇಲ್ಲಿ ತಳಹದಿ ಹಾಕಲಾಗುತ್ತಿದೆ. ಈ ಮಾದರಿ ಕಾರ್ಯಕ್ಕೆ ಸೋಮವಾರ ಜೈಲಿಗೆ ಭೇಟಿ ನೀಡಿ ನ್ಯಾಯಾಧೀಶರು ಶ್ಲಾಘಿಸಿದ್ದಾರೆ.
ದೂರಶಿಕ್ಷಣ ಪೂರೈಸಿದವರಿಗೆ ಪ್ರಮಾಣ ಪತ್ರ ವಿತರಣೆ
ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ ನಡೆಸಲಾಯಿತು. ಈ ವೇಳೆ ಏರ್ಪಡಿಸಲಾಗಿದ್ದ ಬಂಧಿಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಮುಸ್ತಫಾ ಹುಸೇನ್ ಉದ್ಘಾಟಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ವೈದ್ಯರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಡಾ. ಪ್ರೀತಿ ವಿ. ಶಾನ್ಬೋಗ್ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಡಾ.ಕೆ.ಸಂದ್ಯಾ ಕಾವೇರಿ ಅವರು ಬಂಧಿಗಳೊಂದಿಗೆ ಮಾನಸಿಕ ಆರೋಗ್ಯ ನಿರ್ವಹಣೆ ಬಗ್ಗೆ ಸುದೀರ್ಘ ಆಪ್ತ ಸಮಾಲೋಚನೆ ನಡೆಸಿದರು.
ಎಂ.ಜಿ.ಆರ್.ಡಿ.ಎಸ್ ಟ್ರಸ್ಟ್ ವತಿಯಿಂದ ಕಾರಾಗೃಹದ ಬಂಧಿಗಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಯಿತು. ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಸುಮಾರು 20 ಜನ ಸ್ನಾತಕೋತ್ತರ ವಿದ್ಯಾರ್ಥಿನಿಯರು ಮಾನಸಿಕ ಆರೋಗ್ಯ ಕುರಿತ ಕಿರು ನಾಟಕ ಪ್ರದರ್ಶನ ನಡೆಸಿಕೊಟ್ಟರು.
READ | ಬೆಳ್ಳಬೆಳಗ್ಗೆ ಸರಗಳ್ಳತನ, ವಾಕಿಂಗ್ ಬಂದ ವ್ಯಕ್ತಿಯ ಸರ ದೋಚಿ ದುಷ್ಕರ್ಮಿಗಳಿಂದ ಹಲ್ಲೆ
ಮಹಿಳಾ ಕೇಂದ್ರ ಕಾರಾಗೃಹ ಅಧೀಕ್ಷಕಿ ಅನಿತಾ ಎಸ್. ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಮತ್ತು ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶ ಸತೀಶ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮಹೇಶ್ ಕುಮಾರ್ ಜಿಗಣಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ನ ನಿರ್ದೇಶಕ ಕೆ.ಸಿ. ಬಸವರಾಜ್, ಸಿಸ್ಟರ್ ಮೇರಿ ಇವ್ಲಿನ್, ಡಾ.ಅರ್ಚನಾ ಕೆ. ಭಟ್, ವಕೀಲೆ ಪಿ.ಸಿ. ಕವಿತಾ ಪಾಲ್ಗೊಂಡಿದ್ದರು. ಬಂಧಿ ನಿವಾಸಿ ನಾಗರತ್ನ ಪ್ರಾರ್ಥಿಸಿದರು. ಸಂಸ್ಥೆಯ ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.
https://www.suddikanaja.com/2021/07/09/new-course-starts-in-jnnce/