ಸುದ್ದಿ ಕಣಜ.ಕಾಂ | CITY | EDUCATION
ಶಿವಮೊಗ್ಗ: ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ದೇಶದಲ್ಲೇ 40ನೇ ರ್ಯಾಂಕ್ ಗಳಿಸಿದ ಚಂದನಾ ಅವರಿಗೆ ನಗರ ಬಿಜೆಪಿ ಮಹಿಳಾ ಮೋರ್ಚಾದಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
READ | ಸೆಂಟ್ರಲ್ ಜೈಲಲಿದ್ದೇ 23 ಕೋರ್ಸ್ ಪೂರೈಸಿದ ಮಹಿಳೆ ಕೈದಿಗಳು!
ರಾಜೇಂದ್ರ ನಗರ ನಿವಾಸಿ ಚಂದನಾ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇವರು ಪರಿಮಳ ಕಾಫಿ ವರ್ಕ್ಸ್ ಮಾಲೀಕ ಅರವಿಂದ್, ಗೀತಾ ದಂಪತಿಯ ಪುತ್ರಿಯಾಗಿದ್ದಾರೆ.
ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸುರೇಖಾ ಮುರಳೀಧರ್, ಪ್ರಧಾನ ಕಾರ್ಯದರ್ಶಿಯಾದ ಆರತಿ ಪ್ರಕಾಶ್, ರಶ್ಮಿ ಶ್ರೀನಿವಾಸ್, ಮಾಜಿ ಮೇಯರ್ ಸುವರ್ಣ ಶಂಕರ್, ಮಂಜುಳಾ ಪಾಂಡೆ, ಸುನೀತಾ, ರಶ್ಮಿ ಶಿವಕುಮಾರ್, ಯಶೋದಾ, ಸುರೇಖಾ ಪಾಲಾಕ್ಷಪ್ಪ, ಮಯೂರ, ರೇಖಾ ಉಪಸ್ಥಿತರಿದ್ದರು.