ಸುದ್ದಿ ಕಣಜ.ಕಾಂ | CITY | TALENT
ಶಿವಮೊಗ್ಗ: ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಈಗಾಗಲೇ ತನ್ನ ಮುಡಿಗೇರಿಸಿಕೊಂಡಿರುವ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ಮತ್ತೊಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಗೆ ಕಾರಣವಾದ ಛಾಯಾಗ್ರಹಣ
ನಾಗರಾಜ್ ಅವರಿಗೆ ಬಾಂಗ್ಲದೇಶದ ಪ್ರತಿಷ್ಠಿತ ಜೀನಿಯಸ್ (ಜಿ.ಎಪಿಎಸ್) ಡಿಸ್ಟಿಂಕ್ಷನ್ ಪ್ರಶಸ್ತಿ ಲಭಿಸಿದ್ದು, ಬಹುಮಾನ ಪಡೆದಿದ್ದಾರೆ.
ವನ್ಯಜೀವಿ, ಪ್ರವಾಸ, ಪತ್ರಿಕೋದ್ಯಮ, ವರ್ಣ, ಕಪ್ಪು, ಬಿಳುಪು, ಸ್ಟ್ರೀಟ್ ಲ್ಯಾಂಡ್ಸ್ಕೇಪ್ ಫೆÇೀಟೋಗ್ರಾಫಿ, ಜನಜೀವನ ಹೀಗೆ 25ಕ್ಕೂ ಅಧಿಕ ಛಾಯಾಚಿತ್ರಗಳು ಪ್ರಶಸ್ತಿಗಾಗಿ ಆಯ್ಕೆಯಾಗಿದ್ದು, ತೀರ್ಪುಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ನೀಡಿದ್ದು ಯಾರು?
ಬಾಂಗ್ಲದೇಶದ ಅಗಿಲೆ ಫೋಟೋಗ್ರಾಫಿ ಸೊಸೈಟಿಯೂ ನಾಗರಾಜ್ ಅವರಿಗೆ ಪ್ರತಿಷ್ಠಿತ ಜೀನಿಯಸ್ ಡಿಸ್ಟಿಂಕ್ಷನ್ ಅವಾರ್ಡ್ ನೀಡಿದೆ.